Mysuru, ಏಪ್ರಿಲ್ 15 -- Indian Railways:ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ವಿಜೆಎನ್‌ಎಲ್) ಯೋಜನೆಯಡಿ ಹಬ್ಬನಘಟ್ಟ ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ಕಾಲುವೆ ದಾಟುವ ಕಾಮಗಾರಿ ನಡೆಯಲಿರುವ ಕಾರಣ, ಈ ಕೆಳಗಿನ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ, ಭಾಗಶಃ ರದ್ದುಗೊಳಿಸಲಾಗಿದೆ ಮತ್ತು ನಿಯಂತ್ರಿಸಲಾಗಿದೆ. ಅದರಲ್ಲು ಮುಖ್ಯವಾಗಿ ಅರಸೀಕೆರೆ - ಮೈಸೂರು ಪ್ಯಾಸೆಂಜರ್ ರೈಲು ಹಾಗೂ ಮೈಸೂರು - ಚಾಮರಾಜನಗರ, ಚಾಮರಾಜನಗರ - ಮೈಸೂರು ಪ್ಯಾಸೆಂಜರ್ ಸಂಚಾರವನ್ನು 2025ರ ಏಪ್ರಿಲ್ 16 ರಂದು ರದ್ದುಪಡಿಸಲಾಗಿದ್ದರೆ, ಮೈಸೂರು - ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ಕೆಲ ಹೊತ್ತು ನಿಯಂತ್ರಿಸಲಾಗುತ್ತದೆ. ಒಂದು ದಿನದ ಮಟ್ಟಿಗೆ ಈ ಬದಲಾವಣೆ ಮಾಡಲಾಗಿದ್ದು ಪ್ರಯಾಣಿಕರು ಸಹಕರಿಸುವಂತೆ ನೈರುತ್ಯ ರೈಲ್ವೆ ವಲಯದ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

ರೈಲು ಸಂಖ್ಯೆ 56267 ಅರಸೀಕೆರೆ - ಮೈಸೂರು ಪ್ಯಾಸೆಂಜರ್ ರೈಲು ಏಪ್ರಿಲ್ 16, 2025 ರಂದು ರದ್ದುಗೊಳಿಸಲಾಗಿದೆ.

ಏಪ್ರಿಲ್ 29, ಮೇ 3, 10 ಮತ್ತು ಜೂನ್...