Bengaluru, ಮೇ 9 -- ಯುದ್ಧದ ಸಂದರ್ಭಗಳಲ್ಲಿ ವಾಯುಪಡೆ ದೇಶದ ಭದ್ರತೆಯ ಪ್ರಮುಖ ಸೇನೆಗಳಲ್ಲಿ ಒಂದಾಗಿದೆ. ಭೂಪಡೆಯ ನೆರವಿಗೆ ಬಂದು ಗಾಳಿಯಿಂದ ದಾಳಿ ನಡೆಸುವುದು, ಶತ್ರು ಚಟುವಟಿಕೆಗಳ ಮೇಲೆ ನಿಗಾ ಇಡುವುದು ಮತ್ತು ತುರ್ತು ರಕ್ಷಣಾತ್ಮಕ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವುದು ವಾಯುಪಡೆಯ ಪ್ರಮುಖ ಕರ್ತವ್ಯಗಳಾಗಿವೆ. ವಾಯುಪಡೆಯ ವೇಗ, ತಂತ್ರಜ್ಞಾನ, ಮತ್ತು ನಿಖರತೆಯು ಯುದ್ಧದ ತೀರ್ಮಾನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಆಪರೇಷನ್ ಸಿಂದೂರ್ ಕಾರ್ಯಾಚರಣೆ ಸಂದರ್ಭದಲ್ಲಿ ಕೂಡ ವಾಯುಪಡೆ ಅತ್ಯಂತ ಸಮರ್ಥ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಶತ್ರು ಚಟುವಟಿಕೆಗಳನ್ನು ದೂರದಿಂದಲೇ ಗಮನಿಸುವುದು.

ಉಪಗ್ರಹಗಳು, ಡ್ರೋನ್‌ಗಳು ಮತ್ತು ಇತರ ವಾಯುಯಾನಗಳಿಂದ ಮಾಹಿತಿ ಸಂಗ್ರಹ.

ಶತ್ರು ಶಿಬಿರಗಳು, ವೆಪನ್ ಡಿಪೋಗಳು, ಕಮಾಂಡ್ ಸೆಂಟರ್‌‌‌‌ಗಳು ಇತ್ಯಾದಿಗಳ ಮೇಲೆ ತೀಕ್ಷ್ಣ ದಾಳಿ.

ಶತ್ರು ಗಡಿಯ ವಸ್ತುಗಳನ್ನು ನಾಶ ಮಾಡುವ ಸಾಮರ್ಥ್ಯ.

ಮಿರಾಜ್, ಸೂಖೋಯ್, ರಫೇಲ್ ಇತ್ಯಾದಿ ಯುದ್ಧವಿಮಾನಗಳಿಂದ ಶತ್ರು...