Hassan,Bengaluru,ಹಾಸನ,,ಬೆಂಗಳೂರು, ಏಪ್ರಿಲ್ 29 -- ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೈಂಗಿಕ ಹಗರಣದ ಕೇಸ್ ದಾಖಲಾದ ಬಳಿಕ, ಅಶ್ಲೀಲ ವಿಡಿಯೋ ಸೇರಿ ಅನೇಕ ವಿಚಾರಗಳು ಚರ್ಚೆಗೊಳಗಾಗುತ್ತಿವೆ. ಇವುಗಳ ಪೈಕಿ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಪೆನ್‌ಡ್ರೈವ್ ಉಪಸ್ಥಿತಿಯ ಕುರಿತು ಹಾಸನದ ಬಿಜೆಪಿ ನಾಯಕ ಜಿ ದೇವರಾಜೇಗೌಡ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬರೆದ ಪತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಲಭ್ಯವಿರುವ ಪತ್ರದಲ್ಲಿರುವಂತೆ, ಜಿ ದೇವರಾಜೇಗೌಡ ಅವರು ಈ ಪತ್ರವನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಬರೆದಿದ್ದಾರೆ. ಎರಡು ಪುಟದ ಪತ್ರವು "ತುರ್ತು ರಹಸ್ಯ ಪತ್ರ" ಎಂಬ ಶೀರ್ಷಿಕೆಯೊಂದಿಗೆ ಶುರುವಾಗಿದೆ.

ಭಾರತೀಯ ಜನತಾ ಪಕ್ಷ ತಮ್ಮ ಎನ್.ಡಿ.ಎ ಮೈತ್ರಿ ಕೂಟಕ್ಕೆ ಕರ್ನಾಟಕ ರಾಜ್ಯದಲ್ಲಿರುವ ಪ್ರಾದೇಶಿಕ ಪಕ್ಷವಾದ ಜಾತ್ಯಾತೀತ ಜನತಾದಳವನ್ನು ಸೇರ್ಪಡೆ ಮಾಡಿಕೊಳ್ಳುವಾಗ ಎಚ್ಚರ ವಹಿಸಿ ಪಕ್ಷದ ತತ್ವ ಸಿದ್ಧಾಂತಗಳನ್ನು ಪಾಲನೆ ಮಾಡಿ ಆರೋಗ್ಯಕ...