Bangalore, ಏಪ್ರಿಲ್ 28 -- Forest News:ಕರ್ನಾಟಕದಲ್ಲಿ ಮರಕಳ್ಳಸಾಗಣೆ, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ಜತೆಗೆ ಮರಗಳ್ಳರು ಗುಂಡೇಟು ಹಾರಿಸುವುದು ಗಾಯಗೊಳ್ಳುವುದು ಆಗಾಗ ನಡೆಯುತ್ತಲೇ ಇರುತ್ತದೆ. ಈಗ ಈ ಪ್ರಮಾಣ ಕಡಿಮೆಯಾಗಿದ್ದರೂ ಆಗಾಗ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ನಾಲ್ಕೈದು ದಶಕಗಳ ಹಿಂದೆ ಮರಗಳ್ಳತನ ಮಿತಿ ಮೀರಿತ್ತು. ಉರುವಲಿಗಾಗಿ ಕರ್ನಾಟಕ ಅರಣ್ಯ ಇಲಾಖೆಯೇ ಇಂತದೊಂದು ಅವಕಾಶವನ್ನು ಜನರಿಗೆ ಮಾಡಿಕೊಟ್ಟಿತ್ತು. ಆದರೆ ಜನಕ್ಕಿಂತ ಮರಗಳ್ಳರ ಉಪಟಳವೇ ಜೋರಾಗಿತ್ತು. ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರದಲ್ಲಿ ಹೀಗೆ ಮರಗಳ್ಳತನದ ಪ್ರಕರಣಗಳು, ಇಲಾಖೆ ಹಾಗೂ ಜನರ ನಡುವೆ ಸಂಘರ್ಷ ಇದ್ದೇ ಇರುತ್ತಿತ್ತು. ಆಗ ಚಾಮರಾಜನಗರದಲ್ಲಿಯೇ ಯುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದ ಎ.ಸಿ.ಲಕ್ಷ್ಮಣ ಹಾಗೂ ಅ.ನಾ. ಯಲ್ಲಪ್ಪರೆಡ್ಡಿ ಅವರು ಈ ವಿಚಾರದಲ್ಲಿ ಗಟ್ಟಿ ನಿಲುವು ತಾಳಿ ಅಕ್ರಮ ಮರ ಕಡಿತ, ಸಾಗಣೆಗೆ ತಡೆ ಹಾಕಿದ್ದರು. ಅವರು ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ.
ಇಂತಹ ಅನುಭವವನ್ನು ಅರಣ್ಯ ಇಲಾಖೆಯಿಂದ ನ...
Click here to read full article from source
To read the full article or to get the complete feed from this publication, please
Contact Us.