Bengaluru, ಮೇ 7 -- ಭಾರತ ಮತ್ತು ಪಾಕ್‌ ಗಡಿ ನಡುವೆ ಇದೀಗ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಏಪ್ರಿಲ್‌ 22ರಂದು ಕಾಶ್ಮೀರ ತಪ್ಪಲಿನ ಪಹಲ್ಗಾಮ್‌ನಲ್ಲಿನ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರರು, 26 ಜನರನ್ನು ಹತ್ಯೆ ಮಾಡಿದ್ದರು. ಇದರ ಪ್ರತೀಕಾರವಾಗಿ ಇದೀಗ ಭಾರತ, ಪಾಕ್‌ ಗಡಿಭಾಗದ ಉಗ್ರ ನೆಲೆಗಳನ್ನೇ ಗುರಿಯನ್ನಾಗಿಸಿ ದಾಳಿ ಮಾಡಿದೆ. ಈ ದಾಳಿ ಹಿನ್ನೆಲೆಯಲ್ಲಿ ಭಾರತದಲ್ಲಿ ಅದರಲ್ಲೂ ಉತ್ತರ ಭಾರತದ ಕಡೆ ಹಾರಾಡುವ ವಿಮಾನಗಳನ್ನು ವಿಮಾನ ಸಂಸ್ಥೆಗಳು ಕೆಲ ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ಇದಷ್ಟೇ ಅಲ್ಲ ಭಾರತದ ಬಂದರುಗಳಲ್ಲಿ ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳ ಪ್ರವೇಶವನ್ನು ನಿಷೇಧಿಸಿದೆ.

ಹೌದು, ಪಹಲ್ಗಾಮ್ ಉಗ್ರ ದಾಳಿ ನಂತರ ಪಾಕಿಸ್ತಾನಕ್ಕೆ ಭಾರತದ ಪ್ರತಿಕ್ರಿಯೆಯ ಭಾಗವಾಗಿ, ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ (DGS) ಇತ್ತೀಚೆಗಷ್ಟೇ ಭಾರತದ ಬಂದರುಗಳಲ್ಲಿ ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳ ಪ್ರವೇಶವನ್ನು ನಿಷೇಧಿಸಿದೆ. "1958ರ ಮರ್ಚೆಂಟ್ ಶಿಪ್ಪಿಂಗ್ ಕಾಯ್ದೆಯ ಸೆಕ್ಷನ್ 411ರ ಮೂಲಕ ನೀಡಲಾದ ಅಧ...