Mumbai,ಮುಂಬಯಿ,ಬೆಂಗಳೂರು,Bengaluru, ಏಪ್ರಿಲ್ 17 -- ಮುಂಬಯಿ: ಬಾಲಿವುಡ್‌ ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ (Salman Khan house firing) ಪ್ರಕರಣ ಚಿತ್ರರಂಗದಲ್ಲಿ, ರಾಜಕೀಯವಾಗಿ ಸಂಚಲನ ಮೂಡಿಸಿರುವ ಘಟನೆ. ಕಳೆದ ಭಾನುವಾರ (ಏಪ್ರಿಲ್ 14) ಈ ದಾಳಿ ನಡೆದಿದ್ದು, ನಿನ್ನೆ ಗುಂಡು ಹಾರಿಸಿದ ಇಬ್ಬರು ಆರೋಪಿಗಳನ್ನು ಕಛ್‌ ಭುಜ್‌ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಬೆನ್ನಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಸಲ್ಮಾನ್ ಖಾನ್ ನಿವಾಸಕ್ಕೆ ಭೇಟಿ ನೀಡಿದ್ದು, ಭದ್ರತೆಯ ಭರವಸೆ ನೀಡಿದ್ದಾರೆ.

ಈ ಗುಂಡಿನ ದಾಳಿ ನಡೆಸಿದವರು ಲಾರೆನ್ಸ್‌ ಬಿಷ್ಣೋಯ್‌, ಅನಮೋಲ್‌ ಬಿಷ್ಣೋಯ್‌ ಗ್ಯಾಂಗ್‌ನವರು ಎಂಬುದು ದೃಢಪಟ್ಟಿದೆ. ಈ ದಾಳಿ ಆದ ಕೂಡಲೇ ದಾಳಿಯ ಹೊಣೆಯನ್ನು ಹೊತ್ತುಕೊಂಡ ಗ್ಯಾಂಗ್‌, ಸಲ್ಮಾನ್‌ ಖಾನ್‌ಗೆ ಎಚ್ಚರಿಕೆ ಸಂದೇಶ ನೀಡಿತ್ತು. ಸಲ್ಮಾನ್ ಖಾನ್ ಅವರ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಮೇಲೆ ಈ ದಾಳಿ ನಡೆದಿತ್ತು. ಈ ದಾಳಿ ಮತ್ತು ನಂತರದ ವಿದ್ಯಮಾನಗಳ ಕಿರು ಅವಲೋಕನ ಇಲ್ಲಿದೆ.

ಮುಂಬಯಿ...