ಭಾರತ, ಮಾರ್ಚ್ 31 -- ಒಂದು ತಿಂಗಳ ಕಾಲ ರಂಜಾನ್ ಉಪವಾಸ ಅಚರಣೆಯನ್ನು ಕೊನೆಗೊಂಡಿದ್ದು, ಮುಸಲ್ಮಾನರು ಇಂದು ಈದ್ ಉಲ್ ಫಿತ್ರ್ ಹಬ್ಬ ಆಚರಿಸಿದ್ದಾರೆ. ಈ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ ನಡೆಸಿದರು.

ಮೈಸೂರಿನ ತಿಲಕನಗರದ ಈದ್ಗಾ ಮೈದಾನದಲ್ಲಿ ಮುಸಲ್ಮಾನರು ಸೋಮವಾರ ಬೆಳಿಗ್ಗೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ನಡೆಸಿದರು.

ಮೈಸೂರಿನ ವಿವಿಧಡೆ ಈದ್ಗಾ ಮೈದಾನಗಳಲ್ಲಿ ಇದೇ ರೀತಿ ಸಾಮೂಹಿಕ ಪ್ರಾರ್ಥನೆಗಳು ನಡೆದವು.

ಈದ್ ಎಂಬುದು ಏಕತೆ, ಕೃತಜ್ಞತೆ ಮತ್ತು ಔದಾರ್ಯಗಳ ಹಬ್ಬ ಎಂದು ಹೇಳಲಾಗುತ್ತಿದ್ದು, ಇದರಂತೆ, ಮುಸಲ್ಮಾನರು ರಂಜಾನ್ ತಿಂಗಳ ಉಪವಾಸದ ಫಲಕ್ಕಾಗಿ ಅಲ್ಲಾಹುವನ್ನು ಪ್ರಾರ್ಥಿಸುತ್ತಾರೆ.

ತಿಲಕನಗರ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮುಗಿಸಿ ಹೊರಬಂದ ಮುಸಲ್ಮಾನರು ಪರಸ್ಪರ ಶುಭ ಹಾರೈಸಿದರು.

ಈದ್ ಪ್ರಾರ್ಥನೆ ಬಳಿಕ ಕೆಲವರು ಪರಸ್ಪರ ಕುಶಲೋಪರಿ ನಡೆಸಿದರು, ಇನ್ನು ಕೆಲವರು ಅಲ್ಲಿಂದ ಹೊರಟು ಹೋದರು.

ಪ್ರಾರ್ಥನೆ ಮಾಡಿದ ಬಳಿಕ ಪರಸ್ಪರ ಅಪ್ಪಿಕೊಂಡು ರಂಜಾನ್ ಶುಭಾಶಯ ಕೋರಿದ ಮುಸ್ಲಿಂ ಬಾಂಧವರ...