ಭಾರತ, ಮಾರ್ಚ್ 31 -- Mangaluru Drinking Water: ಮಂಗಳೂರು ನಗರಕ್ಕೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಬಂಟ್ವಾಳ ತಾಲೂಕಿನ ತುಂಬೆ ಎಂಬಲ್ಲಿ ಅಣೆಕಟ್ಟು ಕಟ್ಟಿ ಅಲ್ಲಿ ಸಂಗ್ರಹಿಸಲಾದ ನೀರನ್ನು ಲಿಫ್ಟ್ ಮಾಡಿ ಶುದ್ಧೀಕರಿಸುವ ಕಾರ್ಯ ಮಾಡಲಾಗುತ್ತದೆ. ಹೀಗಾಗಿ ಮಂಗಳೂರಿಗರಿಗೆ ಮಲಿನ ನೀರು ಸಿಗುತ್ತದೆ ಎಂಬ ಆತಂಕ ಬೇಡ. ಹಾಗೆಂದು ತುಂಬೆ ಅಣೆಕಟ್ಟು ಹಿನ್ನೀರು ಪ್ರದೇಶದಲ್ಲಿ ಕೊಳಚೆ ನೀರು ಬಿಡಬೇಕು ಎಂದೇನೂ ಇಲ್ಲ. ಶುದ್ಧವಾಗುತ್ತದೆ ಎಂದು ಮತ್ತಷ್ಟು ಕೊಳಚೆ ಸುರಿಯುವುದು ಯಾವ ನ್ಯಾಯ? ಆದರೆ ಮಂಗಳೂರಿಗೆ ಕುಡಿಯಲು ಸಂಗ್ರಹಿಸಿದ ನೀರಿಗೆ ಬಂಟ್ವಾಳದ ಸುಮಾರು 20 ಕಡೆಗಳಲ್ಲಿ ತ್ಯಾಜ್ಯ ಹರಿಯಬಿಡಲಾಗುತ್ತಿದೆ. ಇದು ಆತಂಕಕಾರಿಯಾದ ವಿಚಾರ.

2018ರ ವಿಧಾನಸಭಾ ಚುನಾವಣೆ ಸಂದರ್ಭ, ನೇತ್ರಾವತಿ ನದಿಗೆ ಕೊಳಚೆ ನೀರು ಸೇರುತ್ತಿರುವುದು ಹಾಗೂ ಅದೇ ನೀರನ್ನು ಲಿಫ್ಟ್ ಮಾಡಿ ಮಂಗಳೂರಿನ ಜನರು ಕುಡಿಯುತ್ತಿದ್ದಾರೆ ಎಂಬ ವಿಷಯ ಚುನಾವಣಾ ಪ್ರಚಾರದ ವಸ್ತುವಾಗಿತ್ತು. ಅದಾಗಿ ಮತ್ತೊಂದು ಚುನಾವಣೆ ಬಂತು, ವರ್ಷಗಳು ಏಳು ಉರುಳಿದರೂ ಸಮಸ್ಯೆ ಇನ್...