Bengaluru, ಮಾರ್ಚ್ 28 -- Darshan on Kannada Films: ಪ್ರೇಕ್ಷಕರ ಆಶೀರ್ವಾದದಿಂದ ತೋಟ ಮಾಡಿಕೊಂಡು ಇರುತ್ತೇವೆ. ಅಚ್ಚುಕಟ್ಟಾಗಿ ಹಸು ಸಾಕಿಕೊಂಡು ಅಲ್ಲೇ ಇರುತ್ತೇವೆ. ಆದರೆ, ಯಾವತ್ತಿದ್ದರೂ ನಾವು ಕನ್ನಡಕ್ಕೇ ಸಿನಿಮಾ ಮಾಡೋದು. ಕನ್ನಡ ಸಿನಿಮಾನೇ ಮಾಡೋದು ಎಂದು ದರ್ಶನ್ ಹೇಳಿದ್ದಾರೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಧನ್ವೀರ್ ಅಭಿನಯದ 'ವಾಮನ' ಚಿತ್ರದ ಟ್ರೇಲರನ್ನು ನಟ ದರ್ಶನ್ ಗುರುವಾರ ಬಿಡುಗಡೆ ಮಾಡಬೇಕಿತ್ತು. ಆದರೆ, ರಾಜಸ್ತಾನದಲ್ಲಿ 'ದಿ ಡೆವಿಲ್' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿರುವುದರಿಂದ, ದರ್ಶನ್ ಬರಲಾಗಲಿಲ್ಲ. ಅದರ ಬದಲು, ಟ್ರೇಲರ್ ಬಿಡುಗಡೆ ಮಾಡಿ ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭ ಕೋರುವುದರ ಜೊತೆಗೆ, ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
'ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ. ಬಹಳಷ್ಟು ಜನ ಬೇರೆಬೇರೆ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಕೆಲವರು ಮಾತ್ರ ನಾವು ಇಲ್ಲಿಗೆ ಸೀಮಿತ ಅಂತ ಕನ್ನಡದಲ್ಲಿ ಚಿತ್ರಗಳನ್ನು ಮಾಡುತ್ತಿದ್ದೇವೆ. ಕನ್ನಡ ಚಿತ್ರಗಳನ್ನು ನೋಡದಿದ್ದರೆ, ಇಲ್ಲಿಂ...
Click here to read full article from source
To read the full article or to get the complete feed from this publication, please
Contact Us.