ಭಾರತ, ಫೆಬ್ರವರಿ 13 -- ಚಾಣಕ್ಯರು ತುಮ್ಮ ಅನುಭವದ ಆಧಾರದ ಮೇಲೆ ಮಾನವ ಜೀವನದಲ್ಲಿ ಆಗುವ ಬದಲಾವಣೆಗಳಿಗೆ ಸಂಬಂಧಿಸಿದಂತೆ ಕೆಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಅದು ಚಾಣಕ್ಯರ ನೀತಿಶಾಸ್ತ್ರವೆಂದೇ ಪ್ರಸಿದ್ಧಿಯಾಗಿದೆ. ಅದರಲ್ಲಿ ಚಾಣಕ್ಯರು ಮನುಷ್ಯನ ಜೀವನ ಸುಖದಿಂದ ಕೂಡಿರಲು ಅನೇಕ ವಿಚಾರಗಳನ್ನು ಹೇಳಿದ್ದಾರೆ, ಜೊತೆಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಚಾಣಕ್ಯರ ಪ್ರಕಾರ, ಮನಷ್ಯನಿಗೆ ಸುಖ, ಶಾಂತಿ ಸಿಗಬೇಕೆಂದರೆ ಮೊದಲು ಕುಟುಂಬವು ಸರಿಯಾಗಿರಬೇಕು. ಅಲ್ಲಿರುವ ಎಲ್ಲರೂ ಎಲ್ಲರನ್ನೂ ಅರ್ಥಮಾಡಿಕೊಳ್ಳಬೇಕು. ಕುಟುಂಬ ವ್ಯವಸ್ಥೆಯ ಬೆನ್ನೆಲಬು ಎಂದರೆ ಅದು ಮಹಿಳೆಯರು. ಅವರೇ ಒಂದು ಕುಟುಂಬವನ್ನು ಚೆಂದದಿಂದ ನಡೆಸಿಕೊಂಡು ಹೋಗುವವರು. ಆದರೆ ಕೆಲವು ಮಹಿಳೆಯರು ಕೆಲವು ಕೆಟ್ಟ ಗುಣಗಳನ್ನು ಹೊಂದಿರುತ್ತಾರೆ. ಅದು ಅವರನ್ನು ಹಾಗೂ ಅವರ ಕುಟುಂಬವನ್ನು ವಿನಾಶದ ಹಾದಿಗೆ ಕೊಂಡೊಯ್ಯುತ್ತದೆ. ಈ ಗುಣಲಕ್ಷಣಗಳು ಮಹಿಳೆಯರಿಗೆ ವಿನಾಶಕಾರಿಯಾಗಿದ್ದು ಕುಟುಂಬದ ಶಾಂತಿಯನ್ನು ಹಾಳುಮಾಡುತ್ತದೆ. ಆಚಾರ್ಯ ಚಾಣಕ್ಯರು ಕೆಲವು ಗುಣಗಳನ್ನು ಹೊಂದಿರು...