Bengaluru, ಫೆಬ್ರವರಿ 20 -- ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಏನಾದರೊಂದನ್ನು ಸಾಧಿಸಲು ನಿರಂತರವಾಗಿ ಶ್ರಮಿಸುತ್ತಲೇ ಇರುತ್ತಾರೆ. ಹೊಸ ಕನಸುಗಳನ್ನು ಕಟ್ಟಿಕೊಳ್ಳುತ್ತಾ ಪ್ರಯತ್ನಪಡುತ್ತಾರೆ. ಆದರೆ ಕೆಲವರು ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ಕೆಲವು ತಪ್ಪುಗಳನ್ನು ಮಾಡಿಬಿಡುತ್ತಾರೆ. ಇದರಿಂದ ಅವರು ಸೋಲಿನ ಅನುಭವ ಎದುರಿಸಬೇಕಾಗುತ್ತದೆ. ನೀತಿಶಾಸ್ತ್ರದ ಪಿತಾಮಹ ಎಂಬ ಗೌರವವನ್ನು ಪಡೆದ ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಬಹಳಷ್ಟು ಜನರು ಅತ್ಯಂತ ಒಳ್ಳೆಯವರಾಗಿರುತ್ತಾರೆ. ಆದರೂ ಅವರು ಯಶಸ್ಸಿನ ದಾರಿಯಲ್ಲಿ ಸೋಲುತ್ತಾರೆ. ಅದಕ್ಕೆ ಅವರು ಮಾಡುವ ತಪ್ಪುಗಳೇ ಕಾರಣವಾಗಿರುತ್ತದೆ. ನೀವು ಎಷ್ಟೇ ಒಳ್ಳೆಯವರಾಗಿದ್ದು ಜೀವನದಲ್ಲಿ ಆ ತಪ್ಪುಗಳನ್ನು ಮಾಡಿದರೆ ಸೋಲಿನ ರುಚಿ ನೋಡಬೇಕಾಗುತ್ತದೆ. ಆದ್ದರಿಂದ ಅಪ್ಪಿತಪ್ಪಿಯೂ ಆ ತಪ್ಪುಗಳನ್ನು ಮಾಡಬೇಡಿ ಎಂದು ಚಾಣಕ್ಯರು ಹೇಳುತ್ತಾರೆ.

ಒಬ್ಬ ವ್ಯಕ್ತಿಯು ಅದೆಷ್ಟೇ ಅದೃಷ್ಟಶಾಲಿಯಾಗಿದ್ದರೂ, ಅವನು ಯಾವುದೇ ಕೆಲಸವನ್ನು ಯೋಚಿಸದೇ ಪ್ರಾರಂಭಿಸಬಾರದು...