Bengaluru, ಮಾರ್ಚ್ 29 -- ಆಚಾರ್ಯ ಚಾಣಕ್ಯರು ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿರುವ ನೀತಿಗಳು ಬಹಳ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ. ಅವರ ನೀತಿಗಳು ವ್ಯಕ್ತಿಯೊಬ್ಬನ ಜೀವನವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನೀತಿ ಶಾಸ್ತ್ರದಲ್ಲಿ ಚಾಣಕ್ಯರು ಜೀವನ ಪ್ರಗತಿಗೆ ಅಗತ್ಯವಿರುವ ಅನೇಕ ಸೂತ್ರಗಳನ್ನು ಹೇಳಿದ್ದಾರೆ. ಅವು ಕಷ್ಟದ ಸಮಯದಲ್ಲಿ ಮಾರ್ಗ ತೋರಿಸುವ ದಾರಿ ದೀಪಗಳಾಗಿವೆ ಎಂದು ಹೇಳಲಾಗುತ್ತದೆ. ಚಾಣಕ್ಯರ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ಅವನ ಜೀವನದಲ್ಲಿ ಕಲಿಯುವುದು ಸಾಕಷ್ಟಿರುತ್ತದೆ. ಪ್ರಕೃತಿಯಲ್ಲಿರುವ ಪ್ರತಿ ಗಿಡ, ಮರ, ಪ್ರಾಣಿ, ಪಕ್ಷಿಗಳಿಂದಲೂ ಏನಾದರೂ ಒಂದು ಕಲಿಯಬಹುದಾಗಿದೆ. ಇದರ ಬಗ್ಗೆ ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಪ್ರಾಣಿಗಳಿಂದ ಕೂಡಾ ಅನೇಕ ವಿಷಯಗಳನ್ನು ಕಲಿಯಬಹುದು ಎಂದು ಹೇಳಿದ್ದಾರೆ. ಹಾಗೆ ಕಲಿಯುವುದರಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದಾಗಿದೆ. ಹಾಗಾದರೆ ಯಾವ ಪ್ರಾಣಿಗಳಲ್ಲಿರುವ ವಿಶೇಷ ಗುಣಗಳನ್ನು ಮನುಷ್ಯನು ಅಳವಡಿಸಿಕೊಳ್ಳಬೇಕು ಎಂದು ನೋ...