Bengaluru, ಮಾರ್ಚ್ 12 -- ಆಚಾರ್ಯ ಚಾಣಕ್ಯರು ಜನಸಾಮಾನ್ಯರ ಜೀವನದಲ್ಲಿ ಸಂತೋಷ ಹಾಗೂ ಪ್ರಗತಿಗಾಗಿ ಕೆಲವು ನೀತಿಗಳನ್ನು ರೂಪಿಸಿದರು. ಅನಾದಿ ಕಾಲದಿಂದಲೂ ಚಾಣಕ್ಯರ ತತ್ವಗಳನ್ನು ಜನರು ಅನುಸರಿಸುತ್ತಿದ್ದಾರೆ. ಅದರಿಂದ ತಮ್ಮ ಜೀವನದ ಅನೇಕ ಕಷ್ಟ ಹಾಗೂ ಸಂದಿಗ್ಧ ಪರಿಸ್ಥಿತಿಗಳನ್ನು ನಿಭಾಯಿಸುತ್ತಿದ್ದಾರೆ. ಆದ್ದರಿಂದ ಚಾಣಕ್ಯರ ನೀತಿಗಳು ಇಂದಿಗೂ ಜನಪ್ರಿಯ ಹಾಗೂ ಪ್ರಯೋಜನಕಾರಿಯಾಗಿದೆ. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಚಾಣಕ್ಯರ ಮಾತುಗಳು ಬಹಳ ಉಪಯುಕ್ತವಾಗಿವೆ. ಅದಕ್ಕಾಗಿಯೇ ಅವರನ್ನು ಕೌಟಿಲ್ಯ ಎಂದು ಕರೆಯಲಾಗುತ್ತದೆ. ಜೀವನದಲ್ಲಿ ಅಡೆತಡೆಗಳು ಎದುರಾದಾಗ ಹೇಗೆ ಬುದ್ಧಿವಂತಿಕೆಯಿಂದ ಪಾರಾಗಬೇಕು. ಜೀವನದಲ್ಲಿ ಸಂತೋಷವಾಗಿರುವುದು ಹೇಗೆ ಎಂಬುದನ್ನು ಅವರು ತಮ್ಮ ಅನುಭವದಿಂದ ನಮಗೆ ತಿಳಿಸಿಕೊಟ್ಟಿದ್ದಾರೆ.

ಪ್ರತಿಯೊಬ್ಬರು ಅವರ ಜೀವನದಲ್ಲಿ ಒಳ್ಳೆಯದೇ ಆಗಬೇಕು ಎಂದು ಬಯಸುತ್ತಾರೆ. ಆದರೆ ಕೆಲವೊಮ್ಮೆ ತಿಳಿದೋ ಅಥವಾ ತಿಳಿಯದೆಯೋ ಮಾಡುವ ಸಣ್ಣಪುಟ್ಟ ತಪ್ಪುಗಳು ಅನಾಹುತಗಳನ್ನೇ ಸೃಷ್ಟಿಸುತ್ತವೆ. ಆಗ ಕೆಟ್ಟ ಆಲೋಚನೆಗಳು ಬರುವುದು ...