Chamarajanagar News: ಪತ್ನಿಯಿಂದ ಕರಿ ಮಣಿ ಮಾಲೀಕ ನೀನಲ್ಲ ರೀಲ್ಸ್, ಚಾಮರಾಜನಗರ ಜಿಲ್ಲೆಯಲ್ಲಿ ವ್ಯಕ್ತಿ ಆತ್ಮಹತ್ಯೆ
Hanur, ಫೆಬ್ರವರಿ 15 -- ಚಾಮರಾಜನಗರ: ಪತ್ನಿ ರೀಲ್ಸ್ ಬಗ್ಗೆ ಬುದ್ದಿವಾದರೂ ಹೇಳಿದರೂ ಮಾತು ಕೇಳದೇ ಕರಿ ಮಣಿ ಮಾಲೀಕ ನೀನಲ್ಲ ರೀಲ್ಸ್ ಮಾಡಿದ್ದರಿಂದ ಬೇಸತ್ತು ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ನಡೆದಿರುವುದು ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಪಿಜಿ ಪಾಳ್ಯದಲ್ಲಿ. ಗುರುವಾರ ಮಧ್ಯಾಹ್ನ ಪಿಜಿ ಪಾಳ್ಯ ಗ್ರಾಮ ಕುಮಾರ್ (33) ನೇಣಿಗೆ ಶರಣಾದ ವ್ಯಕ್ತಿ. ಈ ಕುರಿತು ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆ ಕುರಿತು ತನಿಖೆಯನ್ನು ಕೈಗೊಂಡಿದ್ಧಾರೆ.
ಗ್ರಾಮದ ರೂಪಾ ಜತೆ ಕುಮಾರ್ ವಿವಾಹ ಕೆಲ ವರ್ಷದ ಹಿಂದೆ ನಡೆದಿತ್ತು. ಸ್ಥಳೀಯವಾಗಿ ಕೆಲಸ ಮಾಡಿಕೊಂಡಿದ್ದ ಕುಮಾರ್ಗೆ ಪತ್ನಿ ಯಾವಾಗಲೂ ಮೊಬೈಲ್ನಲ್ಲಿಯೇ ಮಗ್ನವಾಗಿರುವುದು ಇಷ್ಟವಾಗುತ್ತಿರಲಿಲ್ಲ. ಈ ಬಗ್ಗೆ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು.ಮನೆಯವರು ಬುದ್ದಿವಾದ ಹೇಳಿದರೂ ರೂಪ ಮೊಬೈಲ್ ಗೀಳು ಬಿಟ್ಟಿರಲಿಲ್ಲ.
ಇತ್ತೀಚಿನ ದಿನಗಳಲ್ಲಿ ರೂಪಾ ರೀಲ್ಸ್ ಹುಚ್ಚಿಗೆ ಸಿಲುಕಿದ್ದು ಇಬ್ಬರ ನಡುವೆ ಜಗಳ ಹೆಚ್ಚಲು ಕಾರಣವಾಗಿತ್ತ...
Click here to read full article from source
To read the full article or to get the complete feed from this publication, please
Contact Us.