Hanur, ಫೆಬ್ರವರಿ 15 -- ಚಾಮರಾಜನಗರ: ಪತ್ನಿ ರೀಲ್ಸ್‌ ಬಗ್ಗೆ ಬುದ್ದಿವಾದರೂ ಹೇಳಿದರೂ ಮಾತು ಕೇಳದೇ ಕರಿ ಮಣಿ ಮಾಲೀಕ ನೀನಲ್ಲ ರೀಲ್ಸ್‌ ಮಾಡಿದ್ದರಿಂದ ಬೇಸತ್ತು ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ನಡೆದಿರುವುದು ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಪಿಜಿ ಪಾಳ್ಯದಲ್ಲಿ. ಗುರುವಾರ ಮಧ್ಯಾಹ್ನ ಪಿಜಿ ಪಾಳ್ಯ ಗ್ರಾಮ ಕುಮಾರ್ (33) ನೇಣಿಗೆ ಶರಣಾದ ವ್ಯಕ್ತಿ. ಈ ಕುರಿತು ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆ ಕುರಿತು ತನಿಖೆಯನ್ನು ಕೈಗೊಂಡಿದ್ಧಾರೆ.

ಗ್ರಾಮದ ರೂಪಾ ಜತೆ ಕುಮಾರ್‌ ವಿವಾಹ ಕೆಲ ವರ್ಷದ ಹಿಂದೆ ನಡೆದಿತ್ತು. ಸ್ಥಳೀಯವಾಗಿ ಕೆಲಸ ಮಾಡಿಕೊಂಡಿದ್ದ ಕುಮಾರ್‌ಗೆ ಪತ್ನಿ ಯಾವಾಗಲೂ ಮೊಬೈಲ್‌ನಲ್ಲಿಯೇ ಮಗ್ನವಾಗಿರುವುದು ಇಷ್ಟವಾಗುತ್ತಿರಲಿಲ್ಲ. ಈ ಬಗ್ಗೆ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು.ಮನೆಯವರು ಬುದ್ದಿವಾದ ಹೇಳಿದರೂ ರೂಪ ಮೊಬೈಲ್‌ ಗೀಳು ಬಿಟ್ಟಿರಲಿಲ್ಲ.

ಇತ್ತೀಚಿನ ದಿನಗಳಲ್ಲಿ ರೂಪಾ ರೀಲ್ಸ್‌ ಹುಚ್ಚಿಗೆ ಸಿಲುಕಿದ್ದು ಇಬ್ಬರ ನಡುವೆ ಜಗಳ ಹೆಚ್ಚಲು ಕಾರಣವಾಗಿತ್ತ...