ಭಾರತ, ಜನವರಿ 26 -- Union Budget 2025 Expectations: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 8ನೇ ಬಜೆಟ್‌ ಮಂಡನೆಗೆ ಸಜ್ಜಾಗುತ್ತಿದ್ದಾರೆ. ಹಣದುಬ್ಬರದ ಪರಿಣಾಮ ಜನಜೀವನದ ಮೇಲಾಗಿದ್ದು, ಆಹಾರ ಪದಾರ್ಥ, ವಿಶೇಷವಾಗಿ ತರಕಾರಿ ಸೇರಿ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಜನರನ್ನು ಕಂಗಾಲು ಮಾಡಿದೆ. ಹೀಗಾಗಿ ಜನಸಾಮಾನ್ಯರು, ಕೇಂದ್ರ ಬಜೆಟ್‌ ಮೂಲಕ ಇದಕ್ಕೆ ಪರಿಹಾರವೇನಾದರೂ ಸಿಗಬಹುದಾ ಎಂಬ ನಿರೀಕ್ಷೆಯಲ್ಲಿದ್ದಾರೆ. ಹಣದುಬ್ಬರ ಪ್ರಮಾಣಕ್ಕೆ ಸರಿಯಾಗಿ ವೇತನ ಹೆಚ್ಚಳವಾಗುತ್ತಿಲ್ಲ. ವೇತನ ಹೆಚ್ಚಳ ಪ್ರಮಾಣಕ್ಕೂ ಹಣುಬ್ಬರ ಪ್ರಮಾಣಕ್ಕೂ ಹೊಂದಿಕೆ ಇಲ್ಲದ ಕಾರಣ ಸೀಮಿತ ಆದಾಯ ಹೊಂದಿರುವ ಕುಟುಂಬಗಳು ಬಹಳ ಸಂಕಷ್ಟ ಎದುರಿಸುತ್ತಿವೆ. ಇನ್ನೊಂದೆಡೆ, ಉದ್ಯೋಗಾವಕಾಶಗಳು ಕಡಿಮೆಯಾಗಿರುವುದು ಕೂಡ ಜನಜೀವನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜನರು ಖರ್ಚು ಮಾಡುವುದನ್ನು ಕಡಿಮೆ ಮಾಡಿದ್ದಾರೆ, ಕಾರ್ಪೊರೇಟ್ ವಲಯದ ಗಳಿಕೆಯ ಮೇಲೂ ಇದು ಪರಿಣಾಮ ಬೀರಿದೆ. ಆದ್ದರಿಂದ ಕೇಂದ್ರ ಬಜೆಟ್ ಮೂಲಕ ಜನಸಾಮಾನ್ಯರು ಈ ಬಾರಿ ನಿರೀಕ್ಷ...