ಭಾರತ, ಮಾರ್ಚ್ 28 -- ಬೃಂದಾವನ ಧಾರಾವಾಹಿಯ ನಿನ್ನೆಯ (ಮಾರ್ಚ್‌ 27) ಸಂಚಿಕೆಯಲ್ಲಿ ಸಹನಾಗೆ ಕಾಲ್‌ ಮಾಡುವ ಆಕಾಶ್‌ ʼನಿನ್ನೆ ಕಾಲೇಜಿನಲ್ಲಿ ನನ್ನ ಬಳಿ ಏನೋ ಹೇಳಬೇಕು ಅಂತ ಕಾಯ್ತಾ ಇದ್ರರಂತೆ ಏನದು ಹೇಳಿʼ ಎಂದು ಕೇಳುತ್ತಾನೆ. ಆಗ ಸಹನಾ ʼಹೌದು ನಾನು ಮೊನ್ನೆ ಸಿಕ್ಕಾಗಲೂ ಅದನ್ನೇ ಹೇಳೋಕೆ ಅಂತಾನೆ ಬಂದಿದ್ದು, ನಿನ್ನೆ ಕೂಡ ಹೇಳಬೇಕು ಅಂತಿದ್ದೆ, ಆದ್ರೆ ಹೇಳೋಕೆ ಆಗ್ತಿಲ್ಲʼ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಅದಕ್ಕೆ ಆಕಾಶ್‌ ʼಮನದಲ್ಲಿ ಇರುವುದನ್ನು ಹೇಳಿಬಿಡಬೇಕು, ಸಮಯಕ್ಕಾಗಿ ಕಾಯಬಾರದುʼ ಎನ್ನುತ್ತಾನೆ. ಅವನ ಮಾತು ಕೇಳಿ ಇನ್ನೇನು ತನ್ನ ಮನದಲ್ಲಿರುವ ಭಾವನೆಗಳನ್ನು ಹೇಳಿ ಬಿಡಬೇಕು ಅಂದುಕೊಳ್ಳುತ್ತಾಳೆ, ಅಷ್ಟೊತ್ತಿಗ ಸರಿಯಾಗಿ ಭಾರ್ಗವಿ ಅಲ್ಲಿಗೆ ಬರ್ತಾಳೆ, ಕೂಡಲೇ ಮಾತು ನಿಲ್ಲಿಸುವ ಸಹನಾ ಆಕಾಶ್‌ಗೆ ಬಾಯ್‌ ಹೇಳಿ ಕಾಲ್‌ ಕಟ್‌ ಮಾಡ್ತಾಳೆ. ಮಗಳ ಬಳಿ ಯಾರ ಕಾಲ್‌ ಎಂದು ಕೇಳುವ ಭಾರ್ಗವಿಗೆ ಫ್ರೆಂಡ್‌ ಎಂದು ಹೇಳಿ ಮಾತು ಮರೆಸುತ್ತಾಳೆ ಸಹನಾ. ಆದರೆ ಮಗಳ ವರ್ತನೆ ಭಾರ್ಗವಿಯ ಮನದಲ್ಲಿ ಅನುಮಾನ ಮೂಡುವಂತೆ ಮಾಡುತ್ತದೆ.

ಭ...