ಭಾರತ, ಏಪ್ರಿಲ್ 18 -- ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್‌ 17) ಸಂಚಿಕೆಯಲ್ಲಿ ಸಿಂಧುವಿನ ವಿಚಾರ ಮುಂದುರಿಸಿಕೊಂಡು ಸುಧಾಮೂರ್ತಿಯನ್ನು ಗೋಳಾಡಿಸುತ್ತಿದ್ದಾರೆ ಭಾರ್ಗವಿ, ಭಾಸ್ಕರ. ʼಸಿಂಧು ಮಾನ ತೆಗೆದು, ನಿಮ್ಮ ಮರ್ಯಾದೆ ಹರಾಜಿಗೆ ಹಾಕುತ್ತೇವೆ, ನಂತರ ನಿಮ್ಮನೆಯವರಲ್ಲಿ ಒಬ್ಬೊರನ್ನೇ ಸಾಯಿಸುತ್ತೇವೆ. ಕೊನೆಯಲ್ಲಿ ನೀನೊಬ್ಬಳೇ ಉಳಿಯಬೇಕು, ನಿನ್ನ ಮನೆಯವರ ಸಾವಿನ ನೋವು ನಿನ್ನನ್ನು ಕಾಡಬೇಕುʼ ಎಂದು ಮತ್ತೆ ಮತ್ತೆ ಹೇಳುವ ಭಾರ್ಗವಿ ಸುಧಾಮೂರ್ತಿ ಅವಳ ಮುಂದೆ ಅಂಗಾಲಾಚಿ ಬೇಡಿಕೊಳ್ಳುವಂತೆ ಮಾಡುತ್ತಾಳೆ. ಸಿಂಧುವನ್ನು ಬಿಟ್ಟು ಬಿಡಿ ಎಂದು ದಯನೀಯವಾಗಿ ಬೇಡಿಕೊಳ್ಳುವ ಸುಧಾಮೂರ್ತಿ ʼಆಯ್ತು ಬಿಡೋಣ, ಆದ್ರೆ ಒಂದು ಕಂಡಿಷನ್‌ʼ ಎನ್ನುತ್ತಾನೆ. ಅದಕ್ಕೆ ಸುಧಾಮೂರ್ತಿ ʼನನ್ನ ಪ್ರಾಣ ಬೇಕಾದ್ರೂ ಕೊಡ್ತೀನಿ ಆದ್ರೆ, ಸಿಂಧುವನ್ನು ಬಿಡಲು ಏನು ಮಾಡಬೇಕು ಹೇಳುʼ ಎಂದು ಭಾಸ್ಕರನನ್ನು ಪ್ರಶ್ನಿಸುತ್ತಾಳೆ. ಆಗ ಭಾಸ್ಕರ ʼನೀನು ಮಂಡಿಯೂರಿ ಅಕ್ಕನ (ಭಾರ್ಗವಿ) ಮುಂದೆ ಬೇಡಿಕೊಳ್ಳಬೇಕು, ಅವಳು ಕನಿಕರ ತೋರಿ ಆಯ್ತು ಬಿಡುತ್ತೇನೆ ಅಂದ್ರೆ ...