ಭಾರತ, ಏಪ್ರಿಲ್ 24 -- ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್‌ 23) ಸಂಚಿಕೆಯಲ್ಲಿ ನೀಲಿ ಬಣ್ಣದ ಸೀರೆಯುಟ್ಟು ಕಾಲೇಜಿಗೆ ಬರುವ ಸಹನಾಗೆ ಮಿಂಚು ಎದುರಾಗುತ್ತಾಳೆ. ಸಹನಾಳನ್ನು ಸೀರೆಯಲ್ಲಿ ನೋಡಿದ ಮಿಂಚು ʼಇವತ್ತಾದ್ರೂ ಯಾವುದೇ ಅಡೆತಡೆಯಿಲ್ಲದೇ ಆಕಾಶ್‌ಗೆ ನಿನ್ನ ಪ್ರೀತಿ ಹೇಳಿಕೋʼ ಎಂದು ಸಲಹೆ ನೀಡುತ್ತಾಳೆ. ಆಗ ಸಹನಾ ʼನಾನು ಪ್ರೀತಿ ಹೇಳಿಕೊಳ್ಳುವುದಿಲ್ಲ, ಪುಷ್ಪಾ ಸಲಹೆ ಕೊಟ್ಟಂತೆ ಕೊನೆವರೆಗೂ ನನ್ನ ಜೊತೆ ಇರಿ ಎಂದು ಈ ಕುಂಕುಮ, ತಾಳಿ, ಬಳೆ ಎಲ್ಲಾ ಕೊಟ್ಟು ನನ್ನ ಬಾಳಸಂಗಾತಿಯಾಗುವಂತೆ ಆಕಾಶ್‌ ಬಳಿ ಕೇಳಿಕೊಳ್ಳುತ್ತೇನೆʼ ಎನ್ನುತ್ತಾಳೆ. ಮಿಂಚು ಆಕಾಶ್‌ನನ್ನು ಕರೆದು ಸಹನಾ ಮುಂದೆ ನಿಲ್ಲಿಸುತ್ತಾನೆ. ಆಕಾಶ್‌ ಬಂದಿದ್ದೆ ತಡ ತನ್ನ ಮನದ ಮಾತುಗಳನ್ನು ಬ್ರೇಕ್‌ ಇಲ್ಲದಂತೆ ಹೇಳುತ್ತಾಳೆ ಸಹನಾ.

ಕೈಯಲ್ಲಿ ತಾಳಿ, ಅರಿಸಿನ, ಕುಂಕುಮ, ಹೂ, ಬಳೆ, ಕಾಲುಂಗರ ಹಿಡಿದು ತಂದ ಸಹನಾ ತನ್ನ ಮನದ ಬಯಕೆಯನ್ನು ಆಕಾಶ್‌ ಬಳಿ ಹೇಳಿಕೊಳ್ಳುತ್ತಾಳೆ. ತಾಳಿ, ಕಾಲುಂಗರ ಈ ಎಲ್ಲದರ ಅರ್ಥ ಹೇಳುತ್ತಾ ಈ ಎಲ್ಲದ್ದಕ್ಕೂ ನೀವೇ ಒಡೆಯ ಆಗಬೇಕು. ನೀ...