ಭಾರತ, ಜನವರಿ 27 -- ಬಿಗ್‌ ಬಾಸ್‌ ಸೀಸನ್ 11ರ ಗೆಲುವು ಹನುಮಂತನದ್ದೇ ಆಗುತ್ತದೆ ಎಂದು ಸಾಕಷ್ಟು ಜನ ಕನಸು ಕಂಡಿದ್ದರು. ಆ ಕನಸು ನನಸಾಗುತ್ತದೆ ಎಂಬ ನಂಬಿಕೆಯನ್ನೂ ಹೊಂದಿದ್ದರು. ಆ ಪ್ರಕಾರ ಈ ಬಾರಿ ಬಿಗ್‌ ಬಾಸ್‌ ಸೀಸನ್ 11ರ ಜಯಭೇರಿ ಭಾರಿಸಿದ ಹನುಮಂತನ ಗೆಲುವನ್ನು ಜನರು ಇದು ತಮ್ಮದೇ ಗೆಲುವು ಎನ್ನುವ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಸಾಕಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ಹನುಮಂತನ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.

ನನ್ನ ಪ್ರೀತಿಯ ಬಂಜಾರ ಸಮುದಾಯದ ಎಲ್ಲಾ ಬಂಧುಗಳೇ ನಮ್ಮೆಲ್ಲರ ಪ್ರೀತಿಯ ಗ್ರಾಮೀಣ ಪ್ರತಿಭೆ ಹೊಂದಿದ ಬಂಜಾರ ಸಮುದಾಯದ ಬಿಗ್ ಬಾಸ್ ಸ್ಪರ್ಧಿ ಹನುಮಂತ ಲಮಾಣಿ ಇವರಿಗೆ ನಮ್ಮ ಧರ್ಮ ಗುರುಗಳು ಆದಂತಹ ಶ್ರೀ ಸಂತ ಸೇವಾಲಾಲ್ ಮಹಾರಾಜರು ಪವಿತ್ರವಾದ ಸಂವಿಧಾನದ ಅಡಿಯಲ್ಲಿ ಡಾಕ್ಟರ ಬಾಬಾಸಾಹೇಬ ಅಂಬೇಡ್ಕರ ರವರ ಆಶೀರ್ವಾದ ಹಾಗೂ ನಮ್ಮೆಲ್ಲ ಸಮುದಾಯದ ಆಶೀರ್ವಾದದೊಂದಿಗೆ ಹನುಮಂತ ಲಮಾಣಿ ಬಿಗ್ ಬಾಸ್ ಸೀಸನ್ 11 ಗೆದ್ದು ಬಿಗಿದ್ದಾರೆ ನಾವೆಲ್ಲ ಹಾರೈಸೋಣ ಎಂದು ಎಸ್‌ ಪ್ರಕಾಶ ಲಮಾಣಿ ಅವರು ಶುಭಕೋರಿದ್ದಾರೆ. ...