Bharat Rashtra Samithi: ತೆಲಂಗಾಣ ರಾಷ್ಟ್ರ ಸಮಿತಿ ಇನ್ನು ಭಾರತ ರಾಷ್ಟ್ರ ಸಮಿತಿ; ಇನ್ನು ದೆಹಲಿ ಕಡೆಗೆ ಕೆಸಿಆರ್ ನಡೆ!
ಭಾರತ, ಡಿಸೆಂಬರ್ 9 -- ಕೆ.ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಇನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್). ಭಾರತೀಯ ಚುನಾವಣಾ ಆಯೋಗ ಈ ಮರುನಾಮಕರಣಕ್ಕೆ ಗುರುವಾರ ಹಸಿರು ನಿಶಾನೆ ತೋರಿದೆ.
ಕೆ.ಚಂದ್ರಶೇಖರ ರಾವ್ ನೇತೃತ್ವದ ಟಿಆರ್ಎಸ್ ಮರುನಾಮಕರಣದ ವಿಚಾರವನ್ನು ಕೆಲವು ತಿಂಗಳ ಹಿಂದೆ ಪ್ರಸ್ತಾಪಿಸಿ ಭಾರತ್ ರಾಷ್ಟ್ರ ಸಮಿತಿ ಎಂದು ಹೆಸರು ಘೋಷಿಸಿತ್ತು. ಅಲ್ಲದೆ ಚಂದ್ರಶೇಖರ ರಾವ್ ಅವರು ಭಾರತೀಯ ಚುನಾವಣಾ ಆಯೋಗಕ್ಕೆ ಮರುನಾಮಕರಣದ ವಿಚಾರವಾಗಿ ಮನವಿಪತ್ರವನ್ನು ಸಲ್ಲಿಸಿದ್ದರು. ಅದನ್ನು ಚುನಾವಣಾ ಆಯೋಗ ನಿನ್ನೆ (ಡಿ.8) ಅಂಗೀಕರಿಸಿದ್ದು, ಮರುನಾಮಕರಣಕ್ಕೆ ಒಪ್ಪಿಗೆ ಸೂಚಿಸಿದೆ.
ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಮರುನಾಮಕರಣದ ವಿಚಾರವನ್ನು ಟಿಆರ್ಎಸ್ ಅಕ್ಟೋಬರ್ 5ರಂದು ಘೋಷಿಸಿತ್ತು. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲೇ ರಾಷ್ಟ್ರಮಟ್ಟದಲ್ಲಿ ಮಹತ್ವದ ಪಾತ್ರ ನಿರ್ವಹಿಸುವುದಕ್ಕಾಗಿ ಕೆ.ಚಂದ್ರಶೇಖರ ರಾವ್ ಅವರು ಪಕ್ಷದ ಮರುನಾಮಕರಣಕ್ಕೆ ಕ್ರಮ ತ...
Click here to read full article from source
To read the full article or to get the complete feed from this publication, please
Contact Us.