Bhagavad Gita: ಭಕ್ತಿಸೇವೆಗಳಲ್ಲಿ ಭಾಗವಹಿಸುವ ಮನುಷ್ಯನಿಗೆ ಜ್ಞಾನೋದಯವಾಗುತ್ತದೆ; ಗೀತೆಯ ಅರ್ಥ ತಿಳಿಯಿರಿ
ಭಾರತ, ಏಪ್ರಿಲ್ 20 -- ರಹಸ್ಯತಮ ಜ್ಞಾನ - ಶ್ಲೋಕ - 2ರ ಮುಂದುವರಿದ ಭಾಗದಲ್ಲಿ ವೇದಾಂತ ಸೂತ್ರದಲ್ಲಿ (3.2.26) ಇದನ್ನು ಹೀಗೆ ವರ್ಣಿಸಿದೆ - ಪ್ರಕಾಶಶ್ಚ ಕರ್ಮಣಿ ಅಭ್ಯಾಸಾತ್. ಭಕ್ತಿ ಸೇವೆಯ ಶಕ್ತಿಯು ಎಷ್ಟೆಂದರೆ ಭಕ್ತಿಸೇವೆಯ ಚಟುವಟಿಕೆಗಳಲ್ಲಿ ತೊಡಗುವುದರಿಂದ ನಿಶ್ಚಯವಾಗಿಯೂ ಮನುಷ್ಯನಿಗೆ ಜ್ಞಾನೋದಯವಾಗುತ್ತದೆ. ಇದರ ವಾಸ್ತವ ಉದಾಹರಣೆಯನ್ನು ನಾರದರ ಹಿಂದಿನ ಜನ್ಮದಲ್ಲಿ ನೋಡಬಹುದು. ಆ ಜನ್ಮದಲ್ಲಿ ಅವರು ಒಬ್ಬ ದಾಸಿಯ ಮನನಾಗಿದ್ದರು. ಅವರಿಗೆ ವಿದ್ಯೆಯೂ ಇರಲಿಲ್ಲ ಮತ್ತು ಅವರು ಉತ್ತಮ ಕುಟುಂಬದಲ್ಲಿ ಜನಿಸಿಯೂ ಇರಲಿಲ್ಲ. ಆದರೆ ಅವರ ತಾಯಿಯು ಮಹಾಭಕ್ತರ ಸೇವೆಯಲ್ಲಿ ತೊಡಗಿದ್ದಾಗ ನಾರದರೂ ಅದರಲ್ಲಿ ನಿರತರಾದರು ಮತ್ತು ಕೆಲವೊಮ್ಮೆ ತಾಯಿಯು ಇಲ್ಲದಿದ್ದಾಗ ಸ್ವತಃ) ನಾರದರೇ ಆ ಮಹಾಭಕ್ತರ ಸೇವೆಯನ್ನೂ ಮಾಡುತ್ತಿದ್ದರು. ನಾರದರೇ ಹೀಗೆ ಹೇಳಿದ್ದಾರೆ -
ಋಷಿಗಳ ಸಹವಾಸದಿಂದ ನಾರದರಿಗೆ ಪ್ರಭುವಿನ ದಿವ್ಯ ಮಹಿಮೆಯನ್ನು ಕೇಳುವುದರಲ್ಲಿ ಮತ್ತು ಸಂಕೀರ್ತನೆ ಮಾಡುವುದರಲ್ಲಿ ಅಭಿರುಚಿಯು ಬಂದಿತು. ಅವರು ಭಕ್ತಿಸೇವೆಗಾಗಿ ಹಂಬಲಿಸಿದ...
Click here to read full article from source
To read the full article or to get the complete feed from this publication, please
Contact Us.