Bengaluru, ಮಾರ್ಚ್ 31 -- ಅರ್ಥ: ನೀನು ಒಬ್ಬನೇ; ಆದರೂ ನೀನು ಆಕಾಶವನ್ನೂ ಎಲ್ಲ ಲೋಕಗಳನ್ನೂ ಅವುಗಳ ನಡುವಣ ಎಲ್ಲ ಸ್ಥಳವನ್ನೂ ವ್ಯಾಪಿಸಿದ್ದೀಯೆ. ಮಹಾತ್ಮನೆ, ಈ ಅದ್ಭುತವಾದ ಮತ್ತು ಉಗ್ರವಾದ ರೂಪವನ್ನು ಕಂಡು ಮೂರು ಲೋಕಗಳು ಭಯಗೊಂಡಿವೆ.
ಭಾವಾರ್ಥ: ದ್ಯಾವಾ ಪೃಥಿವೋಃ (ಸ್ವರ್ಗ ಮತ್ತು ಭೂಮಿಗಳ ನಡುವಣ ಸ್ಥಳ) ಮತ್ತು ಲೋಕತ್ರಯಮ್ (ಮೂರು ಲೋಕಗಳು) ಈ ಶ್ಲೋಕದಲ್ಲಿ ಮಹತ್ವದ ಶಬ್ದಗಳು. ಏಕೆಂದರೆ ಪ್ರಭುವಿನ ಈ ವಿಶ್ವರೂಪವನ್ನು ಅರ್ಜುನನು ಮಾತ್ರವಲ್ಲದೆ ಇತರ ಲೋಕವ್ಯೂಹಗಳಲ್ಲಿರುವವರು ನೋಡಿದರು ಎಂದು ಕಾಣುತ್ತದೆ. ಅರ್ಜುನನು ವಿಶ್ವರೂಪವನ್ನು ಕಂಡದ್ದು ಕನಸಾಗಿರಲಿಲ್ಲ. ಪ್ರಭುವು ಯಾರು ಯಾರಿಗೆ ದಿವ್ಯದೃಷ್ಟಿಯನ್ನು ಕರುಣಿಸಿದನೋ ಅವರೆಲ್ಲರೂ ರಣರಂಗದಲ್ಲಿನ ಈ ವಿಶ್ವರೂಪವನ್ನು ಕಂಡರು.
ಅರ್ಥ: ದೇವತೆಗಳ ಸಮೂಹಗಳೆಲ್ಲ ನಿನ್ನ ಮುಂದೆ ಶರಣಾಗತವಾಗಿ ನಿನ್ನನ್ನೇ ಪ್ರವೇಶಿಸುತ್ತಿರುವುವು. ಅವರಲ್ಲಿ ಕೆಲವರು ಭಯಭೀತರಾಗಿ ಕೈಮುಗಿದುಕೊಂಡು ಪ್ರಾರ್ಥನೆ ಮಾಡುತ್ತಿದ್ದಾರೆ. ಮಹರ್ಷಿಗಳ ಮತ್ತು ಪರಿಪೂರ್ಣ ಸಿದ್ಧರ ಸಮೂಹಗಳು "ಸ್ವಸ್ತಿ, ಸ್...
Click here to read full article from source
To read the full article or to get the complete feed from this publication, please
Contact Us.