Bengaluru, ಮಾರ್ಚ್ 29 -- ಅರ್ಥ: ಪ್ರಭುವಿನ ವಿಶ್ವರೂಪದಲ್ಲಿ ಸಹಸ್ರ ಸಹಸ್ರ ಭಾಗಗಳಿದ್ದರೂ ವಿಶ್ವದ ಅಮಿತ ವಿಸ್ತರಣಗಳು ಒಂದೇ ಸ್ಥಳದಲ್ಲಿರುವುದನ್ನು ಅರ್ಜುನನು ನೋಡಿದನು.

ಭಾವಾರ್ಥ: ತತ್ರ (ಅಲ್ಲಿ) ಎನ್ನುವ ಪದವು ಬಹು ಮುಖ್ಯವಾದದ್ದು. ಅರ್ಜುನನು ವಿಶ್ವರೂಪವನ್ನು ನೋಡಿದಾಗ ಅರ್ಜುನನೂ ಕೃಷ್ಣನೂ ರಥದಲ್ಲಿ ಕುಳಿತಿದ್ದರು ಎನ್ನುವುದನ್ನು ಇದು ತೋರಿಸುತ್ತದೆ. ರಣರಂಗದಲ್ಲಿದ್ದ ಇತರರಿಗೆ ಈ ರೂಪವು ಕಾಣಿಸಲಿಲ್ಲ. ಏಕೆಂದರೆ ಕೃಷ್ಣನು ಈ ದೃಷ್ಟಿಯನ್ನು ಅರ್ಜುನನಿಗೆ ಮಾತ್ರ ಕೊಟ್ಟನು. ಅರ್ಜುನನು ಕೃಷ್ಣನ ದೇಹದಲ್ಲಿ ಸಹಸ್ರಾರು ಲೋಕಗಳನ್ನು ಕಂಡನು. ವೇದಗಳ ಪವಿತ್ರ ಗ್ರಂಥಗಳಿಂದ ನಾವು ತಿಳಿಯುವಂತೆ ಹಲವಾರು ವಿಶ್ವಗಳೂ ಹಲವಾರು ಲೋಕಗಳೂ ಇವೆ. ಅವುಗಳಲ್ಲಿ ಕೆಲವನ್ನು ಮಣ್ಣಿನಿಂದ ಮಾಡಿದೆ, ಕೆಲವನ್ನು ಚಿನ್ನದಿಂದ ಮಾಡಿದೆ. ಕೆಲವನ್ನು ಆಭರಣದಿಂದ ಮಾಡಿದೆ. ಕೆಲವು ಬಹು ದೊಡ್ಡವು; ಕೆಲವು ಅಷ್ಟು ದೊಡ್ಡವಲ್ಲ ಇತ್ಯಾದಿ. ತನ್ನ ರಥದಲ್ಲಿ ಕುಳಿತು ಅರ್ಜುನನು ಇವೆಲ್ಲವನ್ನೂ ಕಂಡನು. ಆದರೆ ಅರ್ಜುನ ಮತ್ತು ಕೃಷ್ಣರ ನಡುವೆ ಏನಾಗುತ್ತಿತ್ತ...