Bengaluru, ಫೆಬ್ರವರಿ 7 -- ಭಗವದ್ಗೀತೆಯು ಶ್ರೀಕೃಷ್ಣನ ಅಮೂಲ್ಯವಾದ ಉಪದೇಶಗಳ ಸಂಗ್ರಹವಾಗಿದೆ. ಭಾರತೀಯ ಸಂಪ್ರದಾಯದಲ್ಲಿ, ಗೀತೆಯು ಉಪನಿಷತ್ತುಗಳು ಮತ್ತು ಧರ್ಮಸೂತ್ರಗಳ ಸ್ಥಾನವನ್ನು ಹೊಂದಿದೆ. ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ದೇಶ ವಿದೇಶಗಳಲ್ಲಿಯೂ ಭಗವದ್ಗೀತೆಯನ್ನು ಪಠಣ ಮಾಡುವವರ ಸಂಖ್ಯೆ ಹೆಚ್ಚಿದೆ. ಭಗವದ್ಗೀತೆಯು ಮಹಾಭಾರತ ಯುದ್ಧದ ಸಮಯದಲ್ಲಿ ಅರ್ಜುನನಿಗೆ ಸಾಕ್ಷಾತ್‌ ಶ್ರೀಕೃಷ್ಣನೇ ಉಪದೇಶಿಸಿದ್ದಾನೆ. ಇದು ಅತ್ಯಂತ ಪ್ರಭಾವಶಾಲಿಯಾದ ಮತ್ತು ಜಗತ್ತಿನ ಸಂಪೂರ್ಣ ಜ್ಞಾನವನ್ನು ಹೊಂದಿರುವ ಪುಸ್ತಕ ಎಂದು ಹೇಳಲಾಗುತ್ತದೆ. ಭಗವಂತನೇ ನುಡಿದ ಅಮೂಲ್ಯ ಪದಗಳು ಮನುಷ್ಯನಿಗೆ ಜೀವನವನ್ನು ನಡೆಸಲು ಸರಿಯಾದ ಮಾರ್ಗವನ್ನು ತೋರಿಸುತ್ತವೆ. ಗೀತೆಯು ಜೀವನದಲ್ಲಿ ಧರ್ಮ, ಕ್ರಿಯೆ ಮತ್ತು ಪ್ರೀತಿಯ ಪಾಠಗಳನ್ನು ಕಲಿಸುತ್ತದೆ. ಇದು ಜೀವನದ ಸಂಪೂರ್ಣ ತತ್ವವವನ್ನು ಹೊಂದಿದೆ. ಆದ್ದರಿಂದ ಅದನ್ನು ಅನುಸರಿಸುವ ವ್ಯಕ್ತಿಯು ಜೀವನದಲ್ಲಿ ಎಂದಿಗೂ ನಿರಾಶೆಗೊಳ್ಳುವುದಿಲ್ಲ. ಶ್ರೀಕೃಷ್ಣನು ಗೀತೆಯಲ್ಲಿ ಹೇಳಿರುವ ಪ್ರಕಾರ ಜೀವನದಲ್ಲಿ ಕೇವಲ ಇಬ್...