Bengaluru, ಏಪ್ರಿಲ್ 5 -- Bengaluru Traffic Advisory: ಬೆಂಗಳೂರು ಆನಂದರಾವ್ ವೃತ್ತ ಮತ್ತು ಮೇಲ್ಸೇತುವೆ ಕಡೆಯಿಂದ ಹಳೇ ಜೆಡಿಎಸ್ ಕಚೇರಿ, ಸಿ. ರಂಗಸ್ವಾಮಿ ವೃತ್ತದ ವರೆಗಿನ ಲೂಪ್‌ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾರ್ಯ ಆರಂಭವಾಗಿದೆ. ಹೀಗಾಗಿ ಇಂದಿನಿಂದ (ಏಪ್ರಿಲ್ 5) 30 ದಿನ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ರಸ್ತೆಗಳಿಗೆ ಸಂಚರಿಸುವ ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಬೆಂಗಳೂರು ಸಂಚಾರ ಪೊಲೀಸರು ತೋರಿಸಿದ್ದಾರೆ.

ವೈಟ್ ಟಾಪಿಂಗ್ ಕಾಮಗಾರಿಯ ಹಿನ್ನೆಲೆಯಲ್ಲಿ ಆನಂದರಾವ್ ವೃತ್ತ ಮತ್ತು ಮೇಲ್ಲೇತುವೆ ಕಡೆಯಿಂದ ಹಳೇ ಜೆಡಿಎಸ್‌ ಕಚೇರಿ, ಸಿ.ರಂಗಸ್ವಾಮಿ ವೃತ್ತದವರೆಗಿನ ಲೂಪ್ ರಸ್ತೆಯಲ್ಲಿ ಸಂಚಾರವನ್ನು ನಿಷೇದಿಸಲಾಗಿದೆ.ಹೀಗಾಗಿ ಏ.5 ರಿಂದ ಮೇ 5ರ ತನಕ ಲೂಪ್ ರಸ್ತೆಯಲ್ಲಿ ಎಲ್ಲಾ ವಿಧವಾದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಇನ್ನು ನಿಷೇಧಿಸಿರುವ ರಸ್ತೆಗಳಿಗೆ ಪರ್ಯಾಯ ಮಾರ್ಗಗಳ ವಿವರ ಹೀಗಿದೆ.

ಆನಂದ ರಾವ್ ವೃತ್ತದ ಮೇಲ್ಸೇತುವೆ ಕಡೆಯಿಂದ ಚಾಲುಕ್ಯ ವೃತ್ತದ ಕಡೆಗೆ ಹೋಗಲು ಲಘು ಹಾಗೂ ಭಾರಿ...