Mangaluru, ಮಾರ್ಚ್ 31 -- Beach Tourism: ನೀವು ಗೋವಾಕ್ಕೆ ಹೋದರೆ, ಅಲ್ಲಿ ಟೂರಿಸ್ಟ್ ಟೆಂಟ್ ನೋಡಿರಬಹುದು. ಅದಕ್ಕಾಗಿ ಗೋವಾಕ್ಕೆ ಹೋಗಬೇಕೇ? ಮಂಗಳೂರಲ್ಲೂ ಇದ್ದರೆ? ಉಡುಪಿಯ ಕಡಲತೀರದಲ್ಲೂ ಸಿಕ್ಕರೆ?..ಹೀಗೊಂದು ಆಲೋಚನೆಯಲ್ಲಿ ಪ್ರವಾಸೋದ್ಯಮ ಇಲಾಖೆ ನೀತಿಯೊಂದನ್ನು ರೂಪಿಸಲು ಹೊರಟಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಕರ್ನಾಟಕದಲ್ಲೂ ಗೋವಾ ಮಾದರಿಯಲ್ಲಿ ಕನ್ನಡ ಕಡಲ ಕಿನಾರೆಯಲ್ಲಿ ವಿಹರಿಸಲು ಟೂರಿಸ್ಟ್ ಶ್ಯಾಕ್ (ಪ್ರವಾಸಿ ಡೇರೆ/ಗುಡಿಸಲು) ಕಾಣಿಸಿಕೊಳ್ಳಬಹುದು.

ಕಡಲ ತಡಿಯಲ್ಲಿ ಪ್ರವಾಸಿ ಸ್ನೇಹಿ, ಪರಿಸರ ಸ್ನೇಹಿ, ಸುಸ್ಥಿತ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರವಾಸಿಗರಿಗೆ ಗುಣಪಟ್ಟವನ್ನು ಮತ್ತಷ್ಟು ಉತ್ಕೃಷ್ಟವನ್ನಾಗಿಸಲು ಹಲವು ಯೋಇನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಅವುಗಳಲ್ಲಿ ಟೂರಿಸ್ಟ್ ಶ್ಯಾಕ್ ಒಂದು. ಇದು ಕೇವಲ ಆರಂಭಿಕ ಹಂತದಲ್ಲಿದ್ದು, ಹಲವು ಸಮಾಲೋಚನೆ, ಸ್ಥಳೀಯರ ಅಭಿಪ್ರಾಯ ಹಾಗೂ ಆಡಳಿತಾತ್ಮಕ ತೀರ್ಮಾನ, ಪ್ಲಸ್ ಮತ್ತು ಮೈನಸ್ ಅಂಶಗಳನ್ನು ಕ್ರೋಢೀಕರಿಸಿ ಸ್ಪಷ್ಟ ನಿ...