Bangalore, ಏಪ್ರಿಲ್ 10 -- Bangalore News: ಬೆಂಗಳೂರಿನ ಪ್ರಸಿದ್ದ ಲಾಲ್ ಬಾಗ್ ನ ಕೆರೆಯಲ್ಲಿ ತೇಲುವ ತೋಟಗಳನ್ನುಪರಿಚಯಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ. ಈ ಮೂಲಕ 30 ಎಕರೆಯಲ್ಲಿ ಹರಡಿರುವ ಕೆರೆ ಮತ್ತು ಕೆರೆಯ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಲು ಮತ್ತು ಸುಂದರಗೊಳಿಸುವ ನಿಟ್ಟಿನಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿದೆ. ಇಂತಹ 22 ತೇಲುವ ತೋಟಗಳನ್ನು ನಿರ್ಮಿಸಲು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ. ಈಗಾಗಲೇ ಶೇ. 80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ 1 ತಿಂಗಳಲ್ಲಿ ತೇಲುವ ತೋಟಗಳು ಕೆರೆಯಲ್ಲಿ ತೇಲಲಿವೆ. ಈ ತೇಲುವ ತೋಟಗಳಲ್ಲಿ ಸಸ್ಯಗಳನ್ನು ನೆಟ್ಟು ಕೆರೆಗೆ ಬಿಡಲಾಗುತ್ತದೆ, 12*15 ಮತ್ತು 6*4 ಅಳತೆಯಲ್ಲಿ ತೇಲುವ ತೋಟಗಳನ್ನು ನಿರ್ಮಿಸಿ ಕನ್ನಾ ಇಂಡಿಕಾ ಗಿಡಗಳನ್ನು ನೆಡಲಾಗುತ್ತದೆ.
ಕನ್ನಾ ಇಂಡಿಕಾ ಸಸ್ಯಗಳೇ ಏಕೆ ಎಂದರೆ ಈ ಸಸ್ಯಗಳು ಜಲ ಸ್ನೇಹಿ ಮತ್ತು ಸುಲಭದ ಬೆಲೆಗೆ ಲಭ್ಯವಾಗುತ್ತವೆ. ಒಮ್ಮೆ ನೀರಿನೊಳಗೆ ಬೇರುಗಳು ಇಳಿದರೆ ಸಸ್ಯಗಳೇ ನೀರಿನಿಂದ ನೇರವಾಗಿ ತಮಗೆ ಬೇಕಾದ ಪೌಷ್ಠಿಕಾಂಶಗಳನ್ನ...
Click here to read full article from source
To read the full article or to get the complete feed from this publication, please
Contact Us.