Bangalore, ಮಾರ್ಚ್ 12 -- ಬೆಂಗಳೂರು: ಉತ್ತರಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಪ್ರವಾಸ ಆಯೋಜಿಸಿರುವುದಾಗಿ ಜಾಹೀರಾತು ನೀಡಿ ಸುಮಾರು 100 ಕ್ಕೂ ಹೆಚ್ಚು ಹಿರಿಯ ನಾಗರೀಕರಿಗೆ ರೂ. 70 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿರುವ ಆರೋಪಿಯಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಣವನ್ನೆಲ್ಲವನ್ನೂ ಆರೋಪಿ ರಾಘವೇಂದ್ರ ರಾವ್‌ ಆನ್‌ಲೈನ್‌ ಬೆಟಿಂಗ್‌ ನಲ್ಲಿ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಚಾನೆಲ್‌ವೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಇತ್ತೀಚೆಗಷ್ಟೇ ಪ್ರವಾಸೋದ್ಯಮ ವ್ಯವಹಾರ ಆರಂಭಿಸಿದ್ದ. ಫೇಸ್‌ ಬುಕ್‌ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಅಯೋಧ್ಯ, ವಾರಣಾಸಿ, ಪ್ರಯಾಗ್‌ರಾಜ್‌ ಮತ್ತಿತರ ಧಾರ್ಮಿಕ ಸ್ಥಳಗಳಿಗೆ 7 ದಿನಗಳ ಪ್ರವಾಸ ಆಯೋಜಿಸಿರುವುದಾಗಿ ಪ್ರಚಾರ ಮಾಡಿದ್ದ. ಆರಂಭದಲ್ಲಿ ಒಂದೆರಡು ಬಾರಿ ಪ್ರವಾಸಿಗರನ್ನು ಕುಂಭಮೇಳಕ್ಕೆ ಕರೆದೊಯ್ದಿದ್ದ ಆರೋಪಿ ರಾಘವೇಂದ್ರ ಅಲ್ಲಿನ ಭಾವಚಿತ್ರಗಳನ್ನು ದಿನನಿತ್ಯ ಹಂಚಿಕೊಳ್ಳುತ್ತಿದ್ದ. ಈ ಮಾಹಿತಿಯನ್ನು ನ...