ಭಾರತ, ಮಾರ್ಚ್ 28 -- B N Garudachar IPS Death: ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್ ಅವರ ತಂದೆ ಕರ್ನಾಟಕದ ದಕ್ಷ ಪೊಲೀಸ್ ಅಧಿಕಾರಿ ಬಿಎನ್‌ ಗರುಡಾಚಾರ್ ಅವರು ಇಂದು(ಮಾರ್ಚ್ 28) ನಸುಕಿನ 3 ಗಂಟೆಗೆ ನಿಧನರಾಗಿದ್ದಾರೆ. ಬೆಂಗಳೂರು ನಗರದಲ್ಲಿರುವ ಅವರ ನಿವಾಸದಲ್ಲಿ ಬಿಎನ್‌ ಗರುಡಾಚಾರ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ (ಮಾರ್ಚ್ 29) ಸಂಜೆ 4 ಗಂಟೆಗೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಬೆಂಗಳೂರು ನಗರದ ಕಾರ್ಪೊರೇಷನ್ ವೃತ್ತದಲ್ಲಿ 1963ರಲ್ಲಿ ಮೊದಲ ಟ್ರಾಫಿಕ್‌ ಸಿಗ್ನಲ್ ಸ್ಥಾಪಿಸಿದ ಕೀರ್ತಿ ಬಿಎನ್ ಗರುಡಾಚಾರ್ ಅವರದ್ದು. ಅಂದು ಅವರು ಬೆಂಗಳೂರು ನಗರ ಸಂಚಾರ ಪೊಲೀಸ್ ಉಪ ಆಯುಕ್ತರಾಗಿದ್ದರು. ಇದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿದ್ದು. ಅಲ್ಲಿ ಈಗ ಅವರ ಪುತ್ರ ಉದಯ ಗರುಡಾಚಾರ್ ಶಾಸಕರಾಗಿದ್ದಾರೆ. ಬಿಜೆಪಿ ಶಾಸಕರಾಗಿರುವ ಉದಯ ಗರುಡಾಚಾರ್ 2021ರ ಮಾರ್ಚ್ 16ರಂದು ಬೆಂಗಳೂರಿನ ಮೊದಲ...