ಭಾರತ, ಮಾರ್ಚ್ 16 -- ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಮನೆಯನ್ನು ಹರಾಜು ಮಾಡಲಾಗುತ್ತಿದೆ. ಶಿವು ಮನೆಯಲ್ಲಿರುವ ಎಲ್ಲ ಸಾಮಾನುಗಳನ್ನು ಹೊರಗೆ ಹಾಕಿದ್ದಾರೆ. ಇತ್ತ ಶಿವು ಅತ್ತೆಯಂದಿರು ತುಂಬಾ ನೊಂದುಕೊಂಡಿದ್ದಾರೆ. ತಾವು ಹೋಗಿ ಆ ಮನೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಉಪಾಯ ಮಾಡಿದ್ದರು. ಆದರೆ, ವೀರಭದ್ರನ ಉಪಾಯದಿಂದ ಅವರು ಮನೆಯಲ್ಲೇ ಉಳಿಯುವಂತಾಗಿದೆ. ಮನೆ ಕೆಲಸದವನ ಬಳಿ ತನ್ನ ಹೆಂಡತಿಯರಿಬ್ಬರೂ ಹೊರಗಡೆ ಹೊಗದಂತೆ ತಡಿ ಎಂದು ಹೇಳಿರುತ್ತಾರೆ. ಅವನು ಬಾಗಿಲಲ್ಲೇ ಚಾಕು ಹಿಡಿದುಕೊಂಡು ನಿಂತಿರುತ್ತಾನೆ. ಶಿವು ಅತ್ತೆಯರು ಮನೆಯಿಂದ ಹೊರ ಹೋಗಲು ಪ್ರಯತ್ನ ಮಾಡುತ್ತಾರೆ. ಆದರೆ, ಅದು ಸಾಧ್ಯವಾಗುವುದಿಲ್ಲ. ಅವನು ನಿಮ್ಮನ್ನು ಕೊಲ್ಲುತ್ತೇನೆ ಎಂದು ಹೆದರಿಸುತ್ತಾನೆ. ಆಗ ಅವರಿಗೆ ಇದೆಲ್ಲ ವೀರಭದ್ರನದೇ ಉಪಾಯ ಎಂದು ಅರ್ಥ ಆಗುತ್ತದೆ.

ಶಿವು ತಾಯಿ ಶಾರದಾ ಕೂಡ ಒಂದು ಉಪಾಯ ಮಾಡಿರುತ್ತಾಳೆ. ಪಾರುಗೆ ರಾತ್ರಿ ನೀಡಿದ ಮಾತಿನಂತೆ ಅವಳು ಮಾಕಾಳಮ್ಮನ ದೇವಸ್ಥಾನದಲ್ಲಿ ಹಣ ಸಿಗುವಂತೆ ಮಾಡುವ ಪ್ರಯತ್ನದಲ್ಲಿರುತ್ತಾಳೆ. ಆದರೆ, ...