ಭಾರತ, ಏಪ್ರಿಲ್ 26 -- ಅಮೃತಧಾರೆ ಸೀರಿಯಲ್‌ ನಾಯಕಿ ಭೂಮಿಕಾ ಆನಂದ್‌ರನ್ನು ಭೇಟಿಯಾಗುತ್ತಾರೆ. ತವರು ಮನೆಯಲ್ಲಿ ಸಮಸ್ಯೆ ಇದೆ. ಜೀವನ್‌ ಕೆಲಸ ಹೋಗಿದೆ. ಅದಕ್ಕೆ ನನ್ನ ಒಡವೆಗಳನ್ನು ಗಿರವಿ ಇಡಲು ನೆರವಾಗಬೇಕೆಂದು ಕೇಳುತ್ತಾಳೆ. ಜೀವನ್‌ಗೆ ನಾನು ಒಡವೆಗಳನ್ನು ಕೊಟ್ಟರೆ ಅವನು ತೆಗೆದುಕೊಳ್ಳುವುದಿಲ್ಲ. ಇದಕ್ಕೆ ಬ್ಯಾಂಕ್‌ನಲ್ಲಿಟ್ಟು ಹಣ ತೆಗೆದುಕೊಳ್ಳೋಣ ಅನ್ನುತ್ತಾಳೆ. ಹೀಗೆ ಆನಂದ್‌ ಜತೆ ಬ್ಯಾಂಕ್‌ಗೆ ಹೋಗುತ್ತಾಳೆ. ಬ್ಯಾಂಕ್‌ನಿಂದ ಹಣ ತರುತ್ತಾಳೆ. ಈ ವಿಷಯವನ್ನು ಗೌತಮ್‌ ಬಳಿ ಹೇಳಬೇಡಿ ಎಂದು ಹೇಳುತ್ತಾರೆ ಭೂಮಿಕಾ. ಒಲ್ಲದ ಮನಸ್ಸಿನಿಂದ ಆನಂದ್‌ ಒಪ್ಪಿಕೊಳ್ಳುತ್ತಾರೆ.

ಇನ್ನೊಂದೆಡೆ ಶಕುಂತಲಾದೇವಿ ಗೌತಮ್‌ನನ್ನು ಭೇಟಿಯಾಗುತ್ತಾಳೆ. ಹುಟ್ಟುಹಬ್ಬದ ಪ್ಲ್ಯಾನ್‌ ಏನು ಎಂದು ಕೇಳುತ್ತಾಳೆ. ಈ ವರ್ಷ ಸಿಂಪಲ್‌ ಆಗಿ ಹುಟ್ಟುಹಬ್ಬ ಆಚರಿಸೋಣ ಎಂದುಕೊಳ್ಳುತ್ತಾಳೆ. ಭೂಮಿಕಾಳಿಗೆ ಹುಟ್ಟುಹಬ್ಬದ ಬಗ್ಗೆ ಹೇಳಬೇಡಿ ಎಂದು ಗೌತಮ್‌ ಕೇಳಿಕೊಳ್ಳುತ್ತಾನೆ. ಆಕೆಗೆ ಸರ್‌ಪ್ರೈಸ್‌ ಕೊಡೋಣ ಎಂದಾಗ ಓಕೆ ಎಂದು ಹೇಳುತ್ತಾರೆ ಶಕುಂತಲಾ. ಗೌತಮ್‌ ಹ...