ಭಾರತ, ಏಪ್ರಿಲ್ 30 -- ಬೆಂಗಳೂರು: ಜೋರು ಮಾತು, ತರ್ಕ, ವಾದ-ವಿವಾದಗಳಿಂದಲೇ ಹೆಸರು ಗಳಿಸಿದ್ದ ಲಾಯರ್ ಜಗದೀಶ್ ಬಿಗ್‌ಬಾಸ್‌ ಸೀಸನ್ 11ರ ಸ್ಪರ್ಧಿಯಾಗಿದ್ದರು. ಆಗಾಗ ಸಿನಿಮಾ ಸ್ಟಾರ್‌ಗಳು ಹಾಗೂ ರಾಜಕಾರಣಿಗಳ ಬಗ್ಗೆ ಕಾಂಟ್ರವರ್ಸಿ ಸ್ಟೇಟ್‌ಮೆಂಟ್‌ಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿದ್ದರು.

ಬಿಗ್‌ಬಾಸ್ ಮನೆಯಲ್ಲೂ ಕಿರಿಕ್ ಮಾಡಿಕೊಂಡು ಕೆಲವೇ ದಿನಗಳಲ್ಲಿ ಹೊರ ಬರುವ ಅವರು ತಮ್ಮ ನಿವಾಸ ಕೊಡಿಗೇಹಳ್ಳಿ ಬಳಿ ಸ್ಥಳೀಯರೊಂದಿಗೆ ಕಿರಿಕ್ ಮಾಡಿಕೊಂಡಿದ್ದರು. ಈ ಗಲಾಟೆ ತಾರಕಕ್ಕೇರಿದ್ದು ಆ ಸಂದರ್ಭ ಆತ್ಮರಕ್ಷಣೆಗೆಂದು ಜಗದೀಶ್ ಬಂದೂಕು ಬಳಸಿದ್ದರು. ಉತ್ತರ ಪ್ರದೇಶದಲ್ಲಿ ಮಾತ್ರ ಬಳಸಲು ಲೈಸನ್ಸ್ ಇದ್ದ ಬಂದೂಕನ್ನು ಬೆಂಗಳೂರಿನ ಕೋಡಿಗೆಹಳ್ಳಿಯಲ್ಲಿ ಬಳಸಿದ್ದ ಕಾರಣ ಲಾಯರ್ ಜಗದೀಶ್ ಬಂಧನಕ್ಕೆ ಒಳಗಾಗಿದ್ದರು. ಅವರೊಂದಿಗೆ ಅವರ ಗನ್‌ಮ್ಯಾನ್‌ನನ್ನು ಕೂಡ ಬಂಧಿಸಲಾಗಿತ್ತು.

ಸುಮಾರು 3 ತಿಂಗಳ ಕಾಲ ಅಂದರೆ 93 ದಿನಗಳು ಜೈಲುವಾಸ ಅನುಭವಿಸಿದ್ದ ಜಗದೀಶ್‌ ಕೊನೆಗೂ ಬೇಲ್‌ ಪಡೆದು ಹೊರ ಬಂದಿದ್ದಾರೆ. ಜೈಲಿನಿಂದ ಹೊರ ಬಂದ ಮೇಲೂ ಸುಮ್ಮ...