ಭಾರತ, ಮೇ 18 -- ಕಳೆದ ಮೂರ್ನ್ಕಾಲು ವರ್ಷಗಳಿಂದ ಹೃದಯಾಘಾತದಿಂದ ಮರಣ ಹೊಂದುವವರ ಸಂಖ್ಯೆ ಏರಿಕೆಯಾಗುತ್ತಿದೆ. ಅದರಲ್ಲೂ 25 ರಿಂದ 40 ವರ್ಷದ ಒಳಗಿನವರು ಹೆಚ್ಚು ಹೆಚ್ಚು ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಇತ್ತೀಚಿಗೆ ಸಾವನ್ನಪ್ಪಿದ ಕಾಮಿಡಿ ಕಿಲಾಡಿ ರಾಕೇಶ್‌ ಪೂಜಾರಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ನಾವು ಹೃದಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ದೀರ್ಘಾವಧಿ ಬದುಕಲು ಮಾತ್ರವಲ್ಲ, ನಮ್ಮ ಒಟ್ಟಾರೆ ಆರೋಗ್ಯ ಸುಧಾರಿಸಲು ಹೃದಯದ ಯೋಗಕ್ಷೇಮವನ್ನು ಕಡೆಗಣಿಸುವಂತಿಲ್ಲ. ಹೃದಯವು ನಮ್ಮ ದೇಹಕ್ಕೆ ಮುಖ್ಯವಾಗಿ ಬೇಕಾಗಿರುವ ಆಮ್ಲಜನಕದ ಪೂರೈಕೆ ಮಾಡುವುದು ಹಾಗೂ ದೇಹದ ಇತರ ಅಂಗಾಂಶಗಳಿಗೆ ವಿಟಮಿನ್‌ ಪೂರೈಕೆ ಮಾಡುವ ಕೆಲಸ ಮಾಡುತ್ತದೆ.

ಆದರೆ ಭಾರತದಲ್ಲಿ ಮಾನವ ದೇಹದ ಪ್ರಮುಖ ಅಂಗವಾಗಿರುವ ಹೃದಯ ಅಪಾಯದಲ್ಲಿದೆ. ಸಾಕಷ್ಟು ಮಂದಿ ಭಾರತೀಯರು ಹೃದ್ರೋಗದ ಸಮಸ್ಯೆ ಎದುರಿಸುತ್ತಿದ್ದಾರೆ. 20 ವಯಸ್ಸಿನಿಂದ 30 ವರ್ಷದವರಲ್ಲಿ ಹೃದಯದ ಸಮಸ್ಯೆ ಹೆಚ್ಚುತ್ತಿರುವುದು ನಿಜಕ್ಕೂ ಗಾ...