New Delhi, ಏಪ್ರಿಲ್ 10 -- Tahawwur Hussain Rana: ಸುದೀರ್ಘ ಗಡೀಪಾರು ಪ್ರಕ್ರಿಯೆಯ ಬಳಿಕ 26/11 ಮುಂಬಯಿ ದಾಳಿ ಸಂಚುಕೋರ ತಹವ್ವುರ್ ಹುಸೇನ್ ರಾಣಾ ಹಸ್ತಾಂತರಿಸುವ ಪ್ರಕ್ರಿಯೆ ಕೊನೆಯ ಹಂತಕ್ಕೆ ಬಂದಿದೆ. ಭಾರತೀಯ ತನಿಖಾಧಿಕಾರಿಗಳ ತಂಡ 64 ವರ್ಷದ ತಹವ್ವುರ್ ಹುಸೇನ್ ರಾಣಾ ಅವರನ್ನು ಭಾರತಕ್ಕೆ ಇಂದು ಕರೆತರುವ ನಿರೀಕ್ಷೆ ಇದೆ. ಇನ್ಸ್‌ಪೆಕ್ಟರ್ ಜನರಲ್ ರ‍್ಯಾಂಕ್‌ನ ಆಫೀಸರ್ ನೇತೃತ್ವದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡವು ರಾಣಾ ಅವರನ್ನು ಗುರುವಾರ ವಿಶೇಷ ವಿಮಾನದಲ್ಲಿ ಕರೆತರಲಿದೆ ಎಂದು ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನ ಮೂಲದ ಕೆನಡಿಯನ್ ಫಿಸಿಷಿಯನ್‌ ರಾಣಾ ಗಡೀಪಾರು ಪ್ರಕ್ರಿಯೆ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಯುಎಸ್ ಫೆಡರಲ್ ಬ್ಯೂರೋ ಆಫ್ ಪ್ರಿಸನ್ಸ್‌ ಬುಧವಾರ ರಾಣಾ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಕಾರಾಗೃಹದಲ್ಲಿ ಇಲ್ಲ ಎಂಬುದನ್ನು ದೃಢಪಡಿಸಿದೆ.

"ಫೆಬ್ರವರಿ ಎರಡನೇ ವಾರದಲ್ಲಿ ಯುಎಸ್ ರಾಜ್ಯ ಕಾರ್ಯದರ್ಶಿ ಮಾ...