ಭಾರತ, ಜನವರಿ 28 -- 'ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು' ಎಂದು ನಾಲಿಗೆ ಹರಿಬಿಡುವವರ ವಿರುದ್ಧ ಹರಿತವಾಗಿಯೇ ನುಡಿದ ಹರಿ ದಾಸರು, ಕರ್ನಾಟಕ ಸಂಗೀತ ಪಿತಾಮಹ ಎಂಬ ಖ್ಯಾತಿಯನ್ನು ಪಡೆದಿದ್ದ ಪುರಂದರ ದಾಸರ ವಾರ್ಷಿಕ ಆರಾಧನೆಯನ್ನು 2025ರ ಜನವರಿ 29 ರ ಬುಧವಾರ ಆಚರಿಸಲಾಗುತ್ತದೆ. ಭಕ್ತಿಯ ಕಣಜವಾಗಿದ್ದ ದಾಸರು ತಮ್ಮ ಜ್ಞಾನ ಹಾಗೂ ಅನುಭವದಿಂದ ಸಮಾಜಕ್ಕೆ ಹಾಡುಗಳ ಮೂಲಕ ಮಾರ್ಗದರ್ಶನ ನೀಡಿದವರು. ಪುರಂದರ ದಾಸರು ರಚಿಸಿದ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ನೊಂದವರಿಗೆ ಭರವಸೆಯ ಬೆಳಕಾಗಿವೆ. ಇವರು ನವಕೋಟಿ ನಾರಾಯಣ ಎಂದು ಜನಪ್ರಿಯರಾಗಿದ್ದರು. ಶಾಲೆಗಳಲ್ಲಿ ಇಂದಿಗೂ ಪುರಂದರ ದಾಸರ ಕೀರ್ತನೆಗಳನ್ನು ಹೇಳಿಕೊಡಲಾಗುತ್ತದೆ.
ಪುರಂದರ ದಾಸರು 1480 ರಿಂದ 1564 ರವರಿಗೆ ಜೀವಿಸಿದ್ದರು. ಇಂದಿನ ಮಹಾರಾಷ್ಟ್ರದ ಸಣ್ಣ ಪಟ್ಟಣವಾದ ಪುರಂದರ ಗಧಾದಲ್ಲಿ ವಾಸಿಸುತ್ತಿದ್ದರು. ಆದರೆ ಅಂದಿನ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದವರು. ಪುರಂದರ ದಾಸರ ಹಿಂದಿನ ಹೆಸರು ಶ್ರೀನಿವಾಸ ನಾಯ್ಕ. ಇವರು ಕುಟುಂಬದವರು ಚಿನ್ನದ ವ್ಯಾಪಾ...
Click here to read full article from source
To read the full article or to get the complete feed from this publication, please
Contact Us.