Bengaluru, ಮೇ 26 -- ನವದೆಹಲಿ: ನೈಋತ್ಯ ಮಾನ್ಸೂನ್ ಶುಕ್ರವಾರ ಕೇರಳಕ್ಕೆ ಪ್ರವೇಶಿಸಿದ್ದು, ಜೂನ್ 1 ರ ಸಾಮಾನ್ಯ ದಿನಾಂಕಕ್ಕಿಂತ ಎಂಟು ದಿನ ಮುಂಚಿತವಾಗಿ ಆಗಮಿಸಿದೆ ಮತ್ತು 2009ರ ನಂತರ 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅವಧಿಗಿಂತ ಮುಂಚಿತವಾಗಿ ಮಳೆ ಆರಂಭವಾಗಿದೆ ಎಂದು ಭಾರತ ಹವಾಮಾನ ಇಲಾಖೆ ಹೇಳಿದೆ. ಮೇ 24ರಂದು ಮಾನ್ಸೂನ್ ಆಗಮನವು ಐಎಂಡಿಯ ಮೇ 27ರ ಆಗಮನದ ಮುನ್ಸೂಚನೆಗೆ ಅನುಗುಣವಾಗಿದೆ ಮತ್ತು ಕಳೆದ 55 ವರ್ಷಗಳಲ್ಲಿ ಐದನೇ ಆರಂಭಿಕ ಮಾನ್ಸೂನ್ ಆಗಮನವಾಗಿದೆ. 1990ರ ಮೇ 18ರಂದು ಅವಧಿಗೂ ಮೊದಲೇ ಮಳೆ ಬಂದಿರುವುದು ವರದಿಯಾಗಿತ್ತು. ಈ ಬಾರಿ ಮತ್ತೆ 16 ವರ್ಷಗಳ ನಂತರ ಅವಧಿಗೂ ಮೊದಲೇ ಮಳೆ ಶುರುವಾಗಿದೆ.

ಕಳೆದ ಎರಡು ದಿನಗಳಲ್ಲಿ, ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಪರ್ಯಾಯ ದ್ವೀಪ ಪ್ರದೇಶಗಳಲ್ಲಿ ಮೋಡದ ಹೊದಿಕೆ ಹೆಚ್ಚಾಗಿದೆ, ಪಶ್ಚಿಮ ಮಾರುತಗಳು ಸರಾಸರಿ ಸಮುದ್ರ ಮಟ್ಟದಿಂದ 4.5 ಕಿ.ಮೀ ವರೆಗೆ ವಿಸ್ತರಿಸಿವೆ. ಮೇ 23 ಮತ್ತು 24 ರಂದು ಕೇರಳದಾದ್ಯಂತ ಭಾರಿ ಮಳೆಯಾಗಿದೆ. 1971-2024 ರ ನಡುವೆ, ಮಾನ್ಸೂನ್ 54...