Bengaluru, ಮೇ 17 -- ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ-ಧಾರವಾಡ ಮಹಾನಗರವನ್ನು ಕೇಂದ್ರಸ್ಥಾನ ಮಾಡಿಕೊಂಡು ಈ ನಾಡಿಗೆ ಅನುಪಮ ಪತ್ರಿಕಾ ಸೇವೆ ಸಲ್ಲಿಸಿದ ಒಂದು ನೂರು ಜನ ಸುದ್ದಿಯೋಧರ ಬದುಕಿನ ಯಶೋಗಾಥೆ ದಾಖಲಿಸಿದ 'ಉತ್ತರದ ಸಾಲು ದೀಪಗಳು' ಎನ್ನುವ ಅಪರೂಪದ ಕೃತಿ ಮೇ. 18ರ ಭಾನುವಾರ ಲೋಕಾರ್ಪಣೆಯಾಗಲಿದೆ. ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಅವರು ಹಲವರ ಸಹಕಾರದಿಂದ ಈ ಕೃತಿ ಸಂಪಾದಿಸಿದ್ದು, ಒಂದು ಪ್ರದೇಶದಲ್ಲಿ ಬಾಳಿದ ಎರಡು ತಲೆಮಾರಿನ ಪ್ರಮುಖ ನೂರು ಜನ ಪತ್ರಕರ್ತರ ಬದುಕು ಮತ್ತು ಸಾಧನೆಯ ಚಿತ್ರಣ ದಾಖಲಿಸಿದ ಅಪರೂಪದ ಮತ್ತು ದೇಶದಲ್ಲೇ ಮೊದಲ ಪ್ರಯತ್ನ ಇದು.
ಈ ವರೆಗೆ ಆಯಾ ರಾಜ್ಯಗಳ ಮಾಧ್ಯಮಕ್ಕೆ ಸಂಬಂಧಿಸಿದ ಅಕಾಡೆಮಿಗಳು, ಸಮಿತಿಗಳು, ಪತ್ರಿಕಾ ಸಂಘಗಳು ಆಯ್ದ ಕೆಲವು ಪತ್ರಕರ್ತರ ಕುರಿತಂತೆ ಪುಸ್ತಕಗಳನ್ನು ಹೊರತಂದಿವೆ. ಆದರೆ ಹೀಗೆ ಒಂದು ಪ್ರದೇಶದ ಮಾಧ್ಯಮ ಇತಿಹಾಸ ಮತ್ತು ಅಲ್ಲಿನ ಪ್ರಮುಖ ಪತ್ರಕರ್ತರ ಬದುಕು ಕಟ್ಟಿಕೊಟ್ಟಿದ್ದು ಇದೇ ಮೊದಲು.
ಕರ್ನಾಟಕ ಪತ್ರಿಕೋದ್ಯಮಕ್ಕೆ ಈಗ ಹದ...
Click here to read full article from source
To read the full article or to get the complete feed from this publication, please
Contact Us.