ಭಾರತ, ಮೇ 6 -- ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ನಿಜಾಮಪುರ ಗ್ರಾಮದಲ್ಲೀಗ ಸಂಭ್ರಮ, ಸಡಗರ. ಕಾರಣ, ದಿನಗೂಲಿ ನೌಕರನ ಪುತ್ರನಿಂದ 78 ವರ್ಷಗಳ ಶೈಕ್ಷಣಿಕ ತೊಡಕು ನಿವಾರಣೆಯಾಗಿದೆ. ಹೌದು ಈತ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವುದು ಅವರ ಸಂಭ್ರಮಕ್ಕೆ ಕಾರಣ. ಬಾಲಕನ ಹೆಸರು ರಾಮ್‌ ಕೇವಲ್‌. ಈ ಸಾಧನೆಗಾಗಿ ಜಿಲ್ಲಾಧಿಕಾರಿ ಆತನನ್ನು ಬರಮಾಡಿಕೊಂಡು ಗೌರವಿಸಿದ್ದೂ ಗಮನಸೆಳೆದಿದೆ.

ರಾಮ್‌ ಕೇವಲ್‌ಗೆ 10ನೇ ತರಗತಿ ಬೋರ್ಡ್‌ ಪರೀಕ್ಷೆಯಲ್ಲಿ ಶೇಕಡ 55 ಅಂಕ ಬಂದಿದ್ದು, ಉತ್ತೀರ್ಣರಾಗಿದ್ದಾರೆ. ತಂದೆ ಜಗದೀಶ್. ದಿನಗೂಲಿ ನೌಕರ. ಓದು ಬರಹ ಇಲ್ಲದ ವ್ಯಕ್ತಿ. ತಾಯಿ ಪುಷ್ಪಾ. ಸರ್ಕಾರಿ ಶಾಲೆಯಲ್ಲಿ ಬಿಸಿಯೂಟಕ್ಕೆ ಅಡುಗೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಫಲಿತಾಂಶದ ಬಳಿಕ ಜಿಲ್ಲಾಧಿಕಾರಿ ಶಶಾಂಕ್ ತ್ರಿಪಾಠಿ ಬಾಲಕ ಸಾಧನೆಗೆ ಗುರುತಿಸಿ ಕಚೇರಿಗೆ ಬರಮಾಡಿಕೊಂಡು ಸನ್ಮಾನಿಸಿದ ಸಂದರ್ಭ ಇದು.

ರಾಮ್‌ ಕೇವಲ್‌ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಕುಟುಂಬದ ಬಾಲಕ. ನಿಜಾಪುರ ಗ್ರಾಮದಲ್ಲಿರುವ ರಾಮ್‌ ಕೇವಲ್‌ನ ಮ...