ಭಾರತ, ಮೇ 7 -- ಧೀರೇನ್‍ ರಾಮ್‍ಕುಮಾರ್‌ ಅಭಿನಯದಲ್ಲಿ ಒಂದು ಚಿತ್ರ ನಿರ್ಮಿಸುತ್ತಿರುವುದಾಗಿ ಶಿವರಾಜಕುಮಾರ್ ಮತ್ತು ಗೀತಾ ಶಿವ ರಾಜಕುಮಾರ್‌, ಡಿಸೆಂಬರ್ 06ರಂದು ಘೋಷಿಸಿದ್ದರು. ಅಂದೇ ಘೋಷಿಸುವುದಕ್ಕೆ ಕಾರಣವೂ ಇದೆ. ಅಂದು ಪಾರ್ವತಮ್ಮ ರಾಜಕುಮಾರ್‌ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ತಮ್ಮ ಸೋದರಳಿಯನ ಅಭಿನಯದಲ್ಲಿ ಚಿತ್ರ ಘೋಷಿಸಿದ್ದರು. ಈಗ ಆ ಚಿತ್ರಕ್ಕೆ 'ಪಬ್ಬಾರ್‌' ಎಂದು ಹೆಸರಿಡಲಾಗಿದ್ದು, ಚಿತ್ರದ ಮುಹೂರ್ತ ಇಂದು ಬೆಳಿಗ್ಗೆ ಮಹಾಲಕ್ಷ್ಮೀ ಲೇಔಟ್‍ನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿದೆ.

ಈ ಮುಹೂರ್ತದಲ್ಲಿ ಶಿವರಾಜಕುಮಾರ್, ಗೀತಾ ಶಿವ ರಾಜಕುಮಾರ್‌, ರಾಮ್‍ಕುಮಾರ್‌, ಪೂರ್ಣಿಮಾ ರಾಮ್‍ಕುಮಾರ್‌, ನಾಗಶೇಖರ್,‍ ಶ್ರೀನಗರ ಕಿಟ್ಟಿ ಮುಂತಾದವರು ಹಾಜರಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜಕುಮಾರ್‌, 'ಬೇರೆ ಭಾಷೆಗಳ ಜೊತೆಗೆ ಸ್ಪರ್ಧಿಸಬೇಕು ಎಂದರೆ, ಹೊಸ ತರಹದ ಚಿತ್ರಗಳು ಬರಬೇಕು. ಪ್ರಯತ್ನವೇ ಮಾಡದಿದ್ದರೆ ಹೇಗೆ? ನಾನು 40 ವರ್ಷದಿಂದ ಚಿತ್ರಗಳನ್ನು ಮಾ...