ಭಾರತ, ಜನವರಿ 29 -- Mahakumbh Stampede: ಇಂದು ಮೌನಿ ಅಮವಾಸ್ಯ ಕಾರಣ ಮಹಾ ಕುಂಭ ಮೇಳದ ಸಂದರ್ಭದಲ್ಲಿ ಲಕ್ಷಾಂತರ ಯಾತ್ರಾರ್ಥಿಗಳು ಪವಿತ್ರ ಸ್ನಾನಕ್ಕಾಗಿ ಜಮಾಯಿಸಿದ್ದರಿಂದ ಸಂಗಮದಲ್ಲಿ ಕಾಲ್ತುಳಿತ ಸಂಭವಿಸಿದ್ದು, 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಈ ಕಾಲ್ತುಳಿತ ದುರಂತಕ್ಕೆ ಕಾರಣವೇನು? ಸಂಗಮದ ಅವ್ಯವಸ್ಥೆ ಕುರಿತು ಭಯಾನಕ ಮಾಹಿತಿಯನ್ನು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಹಾಗೂ ಪ್ರತ್ಯಕ್ಷದರ್ಶಿ ವಿವೇಕ್ ಮಿಶ್ರಾ ಅವರು ಪ್ರಯಾಗ್ರಾಜ್ ಸಂಗಮದಲ್ಲಿರುವ ಅವ್ಯವಸ್ಥೆಯನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. 'ಮುಂಜಾನೆ 2 ಗಂಟೆಗೆ 30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಪವಿತ್ರ ಸ್ನಾನಕ್ಕಾಗಿ ಜಮಾಯಿಸಿದ್ದರಿಂದ ಈ ಘೋರ ದುರಂತ ನಡೆಯಿತು' ಎಂದು ಅವರು ಹೇಳಿದ್ದಾರೆ. 'ಒಂದೇ ಸಮನೆ ಜನರು ನುಗ್ಗಿದ ಕಾರಣ ಪವಿತ್ರ ಸ್ನಾನದ ಬಳಿಕ ಎಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.