ಭಾರತ, ಮೇ 16 -- ಬೆಂಗಳೂರು: ಹೆಬ್ಬಾಳ ಜಂಕ್ಷನ್ ನಲ್ಲಿ ರೈಲ್ವೇ ಹಳಿಗಳ ಮೇಲೆ ಗರ್ಡರ್ ಗಳನ್ನು ಅಳವಡಿಸಲು ನೈಋತ್ಯ ರೈಲ್ವೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸಿರು ನಿಶಾನೆ ತೋರಿಸಿದೆ. ಯಶವಂತಪುರ- ಒಮಲೂರು ವಿಭಾಗವನ್ನು ಸಂಪರ್ಕಿಸುವ ಹೆಬ್ಬಾಳ ರೈಲ್ವೇ ಮಾರ್ಗದಲ್ಲಿ 33.5 ಮೀಟರ್ ಗರ್ಡರ್ ಅಳವಡಿಕೆಯನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಬಿಡಿಎ ತಿಳಿಸಿದೆ.ಇದರಿಂದ ರೈಲ್ವೇ ಹಳಿಗಳ ಮೇಲೆ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಹಾದಿ ಸುಗಮವಾಗಲಿದೆ.
ನೈಋತ್ಯ ರೈಲ್ವೇ ಇಲಾಖೆಯ ಅನುಮತಿಗಾಗಿ ಬಿಡಿಎ ದೀರ್ಘ ಅವಧಿಯಿಂದ ಕಾಯುತ್ತಿತ್ತು. ಗರ್ಡರ್ ಗಳನ್ನು ಅಳವಡಿಸಲು ಮೇ 17 ರಿಂದ 20 ರವರೆಗೆ ನೈಋತ್ಯ ರೈಲ್ವೇಯು ಈ ಮಾರ್ಗದಲ್ಲಿ ರೈಲು ಸಂಚಾರವನ್ನು ರದ್ದುಗೊಳಿಸಲು ಒಪ್ಪಿಕೊಂಡಿದೆ. ಮಧ್ಯರಾತ್ರಿ 3 ಗಂಟೆಯವರೆಗೆ ಕಾಮಗಾರಿ ನಡೆಯಲಿದೆ. ಈ ನಾಲ್ಕು ದಿನಗಳಲ್ಲಿ ಈ ಅವಧಿಯಲ್ಲಿ ಹೆಬ್ಬಾಳ ಮೇಲ್ಸೇತುವೆಯನ್ನು ಭಾಗಶಃ ಮುಚ್ಚುವುದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಕಡೆಗೆ ವಾಹನ ಸಂಚಾರಕ್ಕೆ ಪರ್ಯ...
Click here to read full article from source
To read the full article or to get the complete feed from this publication, please
Contact Us.