Bengaluru, ಮೇ 9 -- ಬೆಂಗಳೂರು: ಕೆಐಎಡಿಬಿ ವಶದಲ್ಲಿರುವ ಹೆಬ್ಬಾಳದ 55 ಎಕರೆ ಜಮೀನು ಇದೀಗ ಕೇಂದ್ರ ಬಿಂದುವಾಗಿದ್ದು ಸರ್ಕಾರವೇ ಉಳಿಸಿಕೊಳ್ಳುವುದೇ ಅಥವಾ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಪಾಲಾಗುವುದೇ ಎಂಬ ಆತಂಕ ಉಂಟಾಗಿದೆ. ಹೆಬ್ಬಾಳದಲ್ಲಿ ಬಹು ಮಾದರಿ ಸಾರಿಗೆ ಹಬ್‌ ನಿರ್ಮಿಸಲು 45 ಎಕರೆ 5.5 ಗುಂಟೆ ಜಮೀನು ಅಗತ್ಯವಿದೆ ಎಂದು ಬಿಎಂಆರ್‌ಸಿಎಲ್‌‌ ಪ್ರತಿಪಾದಿಸುತ್ತಿದೆ. ಮೂರು ಮೆಟ್ರೊ ಮಾರ್ಗಗಳು ಒಂದೆ ಕಡೆ ಸಂಧಿಸುವ ನಗರದ ಏಕೈಕ ಪ್ರದೇಶ ಇದಾಗಿದೆ. ಈ ಮೆಟ್ರೋ ನಿಲ್ದಾಣ ಬೆಂಗಳೂರಿನ ಸಾರಿಗೆ ನೆಟ್‌ ವರ್ಕ್‌ ಗೆ ಬಹುಮುಖ್ಯ ಕೊಂಡಿಯಾಗಲಿದೆ.

ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌- ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೊ ನೀಲಿ ಮಾರ್ಗವು ಹೆಬ್ಬಾಳ ಮೂಲಕ ಹಾದುಹೋಗಲಿದೆ. ಜೆ.ಪಿ. ನಗರದಿಂದ ಕೆಂಪಾಪುರದವರೆಗಿನ ಮೆಟ್ರೊ ಮಾರ್ಗ (ಕಿತ್ತಳೆ ಮಾರ್ಗ), ಹೆಬ್ಬಾಳ-ಸರ್ಜಾಪುರ ಮಧ್ಯದ ಮೆಟ್ರೊ (ಕೆಂಪು) ಮಾರ್ಗವೂ ನಿರ್ಮಾಣಗೊಳ್ಳಲಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ ಎರಡನೇ ಕಾರಿಡಾರ್‌ ಚಿಕ್ಕಬಾಣಾವರ-ಬೆನ್ನ...