Bengaluru, ಮೇ 12 -- ಬೆಂಗಳೂರು: ಪಾಕಿಸ್ತಾನದ ಉಗ್ರರ ವಿರುದ್ಧ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಮೂಲಕ ಹಿಂದೆಂದೂ ನಡೆಯದ ರೀತಿಯ ಅತ್ಯಂತ ವ್ಯವಸ್ಥಿತ ಕಾರ್ಯಾಚರಣೆ ನಡೆಸಿ ಜಗತ್ತಿನ ಗಮನ ಸೆಳೆದಿದೆ. ಸೇನೆಯ ಕಾರ್ಯತಂತ್ರ ಏನು ಮತ್ತು ಉಗ್ರರ ದಮನಕ್ಕೆ ಯಾವ ಕ್ರಮ ಕೈಗೊಳ್ಳಲಾಯಿತು ಎಂಬ ಬಗ್ಗೆ ಸೋಮವಾರ ಮಧ್ಯಾಹ್ನ ಭಾರತೀಯ ಸೇನೆಯ ಮೂರೂ ದಳಗಳ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಏರ್‌ ಮಾರ್ಷಲ್‌ ಎ.ಕೆ. ಭಾರ್ತಿಯವರು ರಾಷ್ಟ್ರಕವಿ ರಾಮಧಾರಿ ಸಿಂಗ್‌ ದಿನಕರ್‌ ಅವರು ಕರ್ಣನ ಕುರಿತು ರಚಿಸಿರುವ ʼರಶ್ಮಿರಥಿʼ ಖಂಡಕಾವ್ಯದ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಅದರ ಬಗ್ಗೆ ರಮೇಶ ದೊಡ್ಡಪುರ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಬರಹದ ಯಥಾವತ್ ಸಾಲುಗಳು ಇಲ್ಲಿವೆ..

ಇವತ್ತು ಮದ್ಯಾಹ್ನ ಭಾರತೀಯ ಸೇನೆಯ ಮೂರೂ ದಳಗಳ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರ (DGMO) ಸುದ್ದಿಗೋಷ್ಠಿ ಇತ್ತು. ಮೊದಲ ಸುತ್ತಿನಲ್ಲಿ ಮೂವರೂ ತಂತಮ್ಮ ದಳಗಳ ವಿವರ ನೀಡಿ ಮೊದಲ ಪ್ರಶ್ನೆ ತೆಗೆದ...