Bengaluru, ಮೇ 8 -- ಬೆಂಗಳೂರು: ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂದು ನಂಬಿಸಿ ನಗರದ ವ್ಯಕ್ತಿಯೊಬ್ಬರಿಗೆ ರೂ. 1.92 ಕೋಟಿ ವಂಚನೆ ಎಸಗಿರುವ ಪ್ರಕರಣವೊಂದು ಕೇಂದ್ರ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿದೆ.

2021ರಲ್ಲಿ ಅಪರಚಿತ ವ್ಯಕ್ತಿ ದೂರುದಾರರಿಗೆ ಕರೆ ಮಾಡಿ ಪರಿಚಯಮಾಡಿಕೊಂಡಿದ್ದರು. ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸುವ ಅವಕಾಶಗಳಿವೆ ಎಂದು ನಂಬಿಸಿದ್ದರು. ಈ ಅಪರಿಚಿತ ವ್ಯಕ್ತಿಯ ಮಾತನ್ನು ನಂಬಿದ ದೂರುದಾರರು ಆರೋಪಿ ಕಳುಹಿಸಿದ್ದ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ರೂ.1.50 ಕೋಟಿ ಹೂಡಿಕೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮತ್ತೆ ಅದೇ ವ್ಯಕ್ತಿ 2024ರಲ್ಲಿ ದೂರುದಾರರಿಗೆ ಕರೆ ಮಾಡಿ, 2021ರಲ್ಲಿ ನೀವು ಹೂಡಿಕೆ ಮಾಡಿದ್ದ ರೂ. 1.50 ಕೋಟಿಗೆ 5.89 ಕೋಟಿ ರೂಪಾಯಿ ಲಾಭ ಬಂದಿರುತ್ತದೆ. ಈ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡಲು ಐಟಿ ಸೇರಿದಂತೆ ವಿವಿಧ ತೆರಿಗೆ ಮತ್ತು ಶುಲ್ಕಗಳನ್ನು ಪಾವತಿಸಲು ರೂ.42.37 ಲಕ್ಷ ಪಾವತಿಸಬೇಕು ಎಂದು ತಿಳಿಸಿದ್ದರು.

ದೂರುದಾರರು ರೂ. 5.89 ಕೋಟಿ ಸಿಗುತ್ತ...