ಭಾರತ, ಮಾರ್ಚ್ 23 -- Huskur Madduramma Jatre Tragedy: ಆನೇಕಲ್ ತಾಲೂಕಿನ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಶನಿವಾರ ಸಂಜೆ ಭಾರಿ ದುರಂತ ಸಂಭವಿಸಿದೆ. ಭಾರಿ ಗಾಳಿ ಮಳೆಗೆ ದೊಡ್ಡನಾಗಮಂಗಲ ಮತ್ತು ರಾಯಸಂದ್ರ ತೇರುಗಳು ನೆಲಕ್ಕೆ ಉರುಳಿ ಕಾರಣ ಇಬ್ಬರು ಮೃತಪಟ್ಟಿದ್ದು, ಕನಿಷ್ಠ 5 ಜನ ಗಾಯಗೊಂಡಿದ್ದಾರೆ. ಚಿಕ್ಕನಾಗಮಂಗಲ ಸಮೀಪ ದೊಡ್ಡನಾಗಮಂಗಲ ತೇರು ಹಾಗೂ ದೇವಸ್ಥಾನದ ಸಮೀಪ ರಾಯಸಂದ್ರದ ತೇರು ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಗಗನಚುಂಬಿ ತೇರುಗಳನ್ನು ಹುಸ್ಕೂರಿನತ್ತ ಎಳೆದೊಯ್ಯುತ್ತಿದ್ದ ವೇಳೆ ಭಾರಿ ಗಾಳಿ ಬೀಸಿದ ಕಾರಣ ನಿಯಂತ್ರಣ ತಪ್ಪಿ ಎರಡು ತೇರುಗಳು ಮಗುಚಿಬಿದ್ದಿವೆ. ಈ ಪೈಕಿ ದೇವಾಲಯದ ಬಳಿಯ ರಾಯಸಂದ್ರದ ತೇರು ಜನರ ಮೇಲೆ ಉರುಳಿದೆ. ಈ ತೇರಿನ ಕೆಳಗೆ ಸಿಲುಕಿದ ಇಬ್ಬರು ಭಕ್ತರು ಸಾವನ್ನಪ್ಪಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತರನ್ನು ತಮಿಳುನಾಡು ಹೊಸೂರಿನ ಲೋಹಿತ್ (24) ಮತ್ತು ಬೆಂಗಳೂರು ಕೆಂಗೇರಿ ಮೂಲದ ಜ್ಯೋತಿ (14) ಎಂದು ಗುರುತಿಸಲಾಗಿದೆ. ಲಕ್ಕಸಂದ್ರದ ರಾಕೇಶ್ ...
Click here to read full article from source
To read the full article or to get the complete feed from this publication, please
Contact Us.