Bangalore, ಮೇ 27 -- ಕರ್ನಾಟಕದಲ್ಲಿ ಈಗ ಎಲ್ಲಿ ನೋಡಿದರೂ ವನ್ಯಜೀವಿ- ಮಾನವ ಸಂಘರ್ಷ. ಅದರಲ್ಲೂ ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ನೆಲೆ ಕಂಡುಕೊಂಡಿರುವ, ಅರಣ್ಯದಂಚಿನ ಭಾಗದಲ್ಲೂ ತಮ್ಮ ನೆಲೆ ವಿಸ್ತರಿಸಿಕೊಂಡಿರುವ ಹುಲಿ ಹಾಗೂ ಚಿರತೆ ದಾಳಿ ಪ್ರಕರಣಗಳು ಕರ್ನಾಟಕದಲ್ಲಿ ಹೆಚ್ಚುತ್ತಲೇ ಇವೆ. ಹುಲಿಯಂತೂ ಅರಣ್ಯ ಪ್ರದೇಶ ದಾಟಿ ಹೊರ ಬಂದು ದಾಳಿ ಮಾಡುತ್ತಿದ್ದರೆ, ಅರಣ್ಯದ ಜತೆಗೆ ಬೆಟ್ಟಗುಡ್ಡ, ಪೊದೆಗಳಿರುವ ನಗರ ಪ್ರದೇಶದ ಅಂಚಿಯಲ್ಲೂ ಚಿರತೆಗಳು ಲಗ್ಗೆ ಇಟ್ಟು ದಾಳಿ ಮಾಡುತ್ತಿವೆ. ಈ ಎರಡೂ ಪ್ರಾಣಿಗಳು ಮನುಷ್ಯನನ್ನು ಬೇಟೆಯಾಡುತ್ತವಾ, ಹುಲಿ ಮನುಷ್ಯನ ಮೇಲೆ ದಾಳಿ ಮಾಡಿದಾಗ ಹೇಗಿರುತ್ತದೆ, ಚಿರತೆ ದಾಳಿ ಹೇಗಿರಬಹುದು ಎನ್ನುವ ಕುತೂಹಲಕರ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಕರ್ನಾಟಕ ಮಾತ್ರವಲ್ಲದೇ ಗುಜರಾತ್‌ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಹುಲಿಗಳೇ ಕಾಡಿನ ರಾಜ. ಏಕೆಂದರೆ ಸಿಂಹ ಸೀಮಿತ ಪ್ರದೇಶದಲ್ಲಿ ಇರುವುದು ಬಿಟ್ಟರೆ ಹುಲಿಯ ಸಾಮ್ರಾಜ್ಯವೇ ದೊಡ್ಡದು. ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು, ರಾಜಸ್ತಾನ, ಕೇರಳ, ಉತ್ತರ...