ಭಾರತ, ಏಪ್ರಿಲ್ 3 -- Arbitration Competition: ಹುಬ್ಬಳ್ಳಿ ವಿದ್ಯಾನಗರದ ಕೆಎಲ್‌ಇ ಸಂಸ್ಥೆ ಜಿಕೆ ಕಾನೂನು ಮಹಾವಿದ್ಯಾಲಯದ ವತಿಯಿಂದ ಕಾನೂನು ವಿದ್ಯಾರ್ಥಿಗಳಿಗಾಗಿ ಏಪ್ರಿಲ್ 5 ಹಾಗೂ 6 ರಂದು ರಾಷ್ಟ್ರಮಟ್ಟದ ಮೂರನೇ ಸಂಧಾನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ದ್ಯಾನೇಶ್ವರ ಚೌರಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ (ಏಪ್ರಿಲ್ 3) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಂಎಸ್ ಆರ್ ಸಭಾ ಭವನದಲ್ಲಿ ಈ ಸ್ಪರ್ಧೆ ಜರುಗಲಿದ್ದು, ವಿದ್ಯಾರ್ಥಿಗಳಿಗೆ ನ್ಯಾಯಾಲಯದಲ್ಲಿ ಬರುವ ವ್ಯಾಜ್ಯಗಳನ್ನು ಹೇಗೆ ಸಂಧಾನದ ಮೂಲಕ ಪರಿಹರಿಸಬೇಕು ಎಂಬುದು ಸೇರಿದಂತೆ ವ್ಯಾಜ್ಯ ಪರಿಹರಿಸಲು ವಿದ್ಯಾರ್ಥಿಗಳಿಗೆ ಕೌಶಲಗಳ ಕಲಿಸುವ ಉದ್ದೇಶದಿಂದ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ಎ.೫ ರಂದು ಬೆಳಿಗ್ಗೆ 10 ಗಂಟೆಗೆ ಸಂಧಾನ ಸ್ಪರ್ಧೆಯ ಉದ್ಘಾಟನೆಯನ್ನು ಧಾರವಾಡ ಹೈಕೋರ್ಟ್ ನ್ಯಾಯಾಧೀಶ ಇ.ಎಸ್. ಇಂದ್ರೇಶ ನೆರವೇರಿಸುವರು. ಕರಾ ಕಾನೂನು ವಿವಿ ಮೌಲ್ಯಮಾಪನ ಕುಲಸಚಿವೆ ರತ್ನ ಭರಮಗೌಡ, ಸಹಾಯಕ ಪ್ರಾಧ್ಯಾಪಕ ಡಾ. ಬಾಬ...