ಭಾರತ, ಮೇ 6 -- ಅಣಕು ಯುದ್ಧ ತಾಲೀಮು: ಜಮ್ಮು- ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತೊಂದು ಸುತ್ತಿನ ಬಿಕ್ಕಟ್ಟು ಶುರುವಾಗಿದೆ. ಉಗ್ರ ದಾಳಿ ಬೆಂಬಲಿಸುತ್ತ ಮುನ್ನಡೆಯುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ರಾಜತಾಂತ್ರಿಕ ಸಮರ ಸಾರಿದೆ. ಇದಲ್ಲದೆ, ಜಾಗತಿಕ ಮಟ್ಟದಲ್ಲೂ ಉಗ್ರ ನಿಗ್ರಹಕ್ಕೆ ಸಂಬಂಧಿಸಿ ಪಾಕಿಸ್ತಾನ ತನ್ನ ನಿಲುವು ಸ್ಪಷ್ಟಪಡಿಸುವಂತೆ ಭಾರತ ಒತ್ತಡ ಹೇರುತ್ತಿದ್ದು, ಇತರೆ ದೇಶಗಳಿಂದಲೂ ಒತ್ತಡ ಉಂಟಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ನಡುವೆ, ಮೇ 7 ರಂದು ಬುಧವಾರ ದೇಶಾದ್ಯಂತ 244 ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ ಅಣಕು ಯುದ್ಧ ತಾಲೀಮು (ಮಾಕ್ ಡ್ರಿಲ್) ಅಥವಾ ನಾಗರಿಕ ಸ್ವರಕ್ಷಾ ಕಾರ್ಯಾಚರಣೆ (ಸಿವಿಲ್ ಡಿಫೆನ್ಸ್ ಡ್ರಿಲ್) ನಡೆಸಬೇಕು ಎಂದು ಗೃಹ ಸಚಿವಾಲಯವು ಎಲ್ಲ ರಾಜ್ಯಗಳಿಗೂ ಆದೇಶ ನೀಡಿದೆ. ಕೇಂದ್ರ ಸರ್ಕಾರದ ಈ ಆದೇಶವು ಭಾರತದ ಹಿರಿಯರ ನೆನಪಿನ ಬುತ್ತಿ ಬಿಚ್ಚುವಂತೆ ಮಾಡಿದೆ.
ಮಧುರೇಂದ್ರ ಪ್ರಸಾದ್ ಸಿನ್ಹಾ ಎಂಬ 71 ವರ್ಷದ ಪತ್ರಕರ್ತ 1971ರ ಭಾರತ- ಪಾಕ್ ...
Click here to read full article from source
To read the full article or to get the complete feed from this publication, please
Contact Us.