Bengaluru, ಮೇ 27 -- ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್ ಮೂಲದ ಒಂದೇ ಕುಟುಂಬದ ಏಳು ಮಂದಿ ಹರಿಯಾಣದ ಪಂಚಕುಲದಲ್ಲಿ ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಸೆಕ್ಟರ್ 27 ಪ್ರದೇಶದಲ್ಲಿ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಕುಟುಂಬ ಸದಸ್ಯರ ಶವ ಪತ್ತೆಯಾಗಿದೆ. ಅವರು ಕಾರಿನೊಳಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಕಾರಿನಿಂದ ಎರಡು ಪುಟಗಳ ಡೆತ್ನೋಟ್ ವಶಪಡಿಸಿಕೊಂಡಿದ್ದಾರೆ. ಪತ್ರದಲ್ಲಿ, ಸಾಲದಿಂದಾಗಿ ದಿವಾಳಿಯಾದ ಕಾರಣ ಅವರು ಬೇರೆ ದಾರಿಯಿಲ್ಲದೆ ಈ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಬರೆದಿದ್ದಾರೆ.
ಮೃತಪಟ್ಟವರಲ್ಲಿ ವ್ಯಕ್ತಿ, ಆತನ ಪತ್ನಿ, ಅವರ ಮೂವರು ಮಕ್ಕಳು ಮತ್ತು ವೃದ್ಧ ಪೋಷಕರು ಸೇರಿದ್ದಾರೆ. ಕುಟುಂಬವು ಪಂಚಕುಲದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ಸೋಮವಾರ ಈ ಕುಟುಂಬವು ಪಂಚಕುಲದಲ್ಲಿ ಬಾಗೇಶ್ವರ ಧಾಮದ ಬಾಬಾ ಧೀರೇಂದ್ರ ಶಾಸ್ತ್ರಿ ಅವರ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿತ್ತು. ಆದಾಗ್ಯೂ, ಕಾರ್ಯಕ್ರಮದ ನಂತರ ಮನೆಗೆ ಮರಳುವ ಬದಲು, ಅವರು ತಮ್ಮ ಹ...
Click here to read full article from source
To read the full article or to get the complete feed from this publication, please
Contact Us.