ಭಾರತ, ಏಪ್ರಿಲ್ 27 -- ಸ್ನಾನ ಮನುಷ್ಯನ ದಿನಚರಿಯ ಭಾಗವಾಗಿದೆ. ಬೇಸಿಗೆಯಲ್ಲಿ ಪದೇ ಪದೇ ಸ್ನಾನ ಮಾಡಬೇಕು ಎನ್ನಿಸುತ್ತದೆ. ಸ್ನಾನ ಮಾಡಿದ ಮೇಲೆ ಮನಸ್ಸಿಗೆ ಆಹ್ಲಾದ ಭಾವನೆ ಮೂಡುತ್ತದೆ. ಇದರಿಂದ ಆಯಾಸ, ಚಡಪಡಿಕೆ ಕಡಿಮೆಯಾಗುತ್ತದೆ. ಮನಸ್ಥಿತಿ ಸುಧಾರಿಸುತ್ತದೆ. ವಿಜ್ಞಾನದಿಂದ ಆರ್ಯವೇದದವರೆಗೆ ಸ್ನಾನದಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂದು ಹೇಳುತ್ತದೆ. ಆದರೆ ಸ್ನಾನ ಮಾಡಲು ಕೆಲವು ನಿಯಮಗಳಿವೆ. ದಿನದಲ್ಲಿ ಈ ಕೆಲವು ಸಮಯದಲ್ಲಿ ಸ್ನಾನ ಮಾಡುವುದು ಸೂಕ್ತವಲ್ಲ. ಇದರಿಂದ ಪ್ರಯೋಜನಕ್ಕಿಂತ ಅನಾನುಕೂಲವೇ ಹೆಚ್ಚು ಎನ್ನುತ್ತದೆ ಆಯುರ್ವೇದ.

ಬೇಸಿಗೆ ಕಾಲದಲ್ಲಿ ಹೊರಗೆ ಹೋಗಿ ಬಂದಾಗ ಬೆವರು ಸೆಖೆಯ ಕಾರಣದಿಂದ ತಣ್ಣೀರಿನ ಸ್ನಾನ ಮಾಡಬೇಕು ಅನ್ನಿಸುತ್ತದೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ವಾಸ್ತವಾಗಿ ಹೊರಗಿನಿಂದ ಬಂದಾಗ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ಆಗ ತಣ್ಣೀರು ಸ್ನಾನ ಮಾಡಿದಾಗ ಉಷ್ಣ ಹಾಗೂ ಶೀತ ಎರಡೂ ಒಂದಾಗಿ ಆರೋಗ್ಯ ಹದಗೆಡಬಹುದು. ಇದರಿಂದ ಜ್ವರ, ಶೀತದಂತಹ ಸಮಸ್ಯೆಗಳು ಎದುರಾಗಬಹುದು.

ಆಯುರ್ವೇದ...